ಹಾಸನ : ಇತ್ತೀಚೆಗೆ ಜಿಲ್ಲೆಯಲ್ಲಿ 38 ಮಂಗಗಳ ಮಾರಣಹೋಮ ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಾಥಮಿಕ ತನಿಖೆ ಪ್ರಕಾರ ಅವನ್ನು ಒಂದೇ ಬ್ಯಾಗನಲ್ಲಿ ತುಂಬಿ ಸ್ಥಳಾಂತರಿಸುವ ವೇಳೆ ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬAಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಜಿಲ್ಲಾಧಿಕರಿ ಆರ್. ಗಿರೀಶ್ ಜಿಲ್ಲಾ ಪೊಲ್ಲೀಸ್ ಅಧೀಕ್ಷಕ ಶ್ರೀವಿವಾಸ್ ಗೌಡ ಹಾಗೂ ಉಪ ಅರಣ್ಯ ಸಂರಕ್ಷಣಾದಿಕಾರಿ (ಡಿ.ಎಫ್.ಓ) ಬಸವರಾಜು ಅವರು ಸೋಮವಾರ ಇಲ್ಲಿ ಜಂಟಿ ಸಿದ್ದಿಗೋಷ್ಟಿ ನಡೆಸಿದ್ದು. ನರಳುತ್ತಿದ್ದ ಮಂಗಗಳ ಪೈಕಿ ಒಂದಕ್ಕೆ ಮಾತ್ರ ಚಿಕಿತ್ಸೆ ನೀಡಿ ಬದುಕಿಸಲಾಗಿದೆ.
ಉಳಿದ 12 ಮಂಗಗಳ ಅಲ್ಲಿಂದ ಕಾಲ್ಕತ್ತಿವೆ. ಪೊಲ್ಲೀಸರು 5 ಜನರನ್ನು ಬಂದಿಸಿದ್ದು ಅರಣ್ಯ ಇಲಾಖೆಯವರು ಇಬ್ಬರನ್ನು ಸೆರೆಹಿಡಿದಿದ್ದಾರೆ. ಮೇಲ್ನೋಟಕ್ಕೆ ಜಿಲ್ಲೆಯ ಹಾಸನ ತಾಲೂಕು ಉಗನೆ ಗ್ರಾಮದ ಆಸುವಾಸು ಮಂಗಗಳ ಕಾಟ ಹೆಚ್ಚಾಗಿ ಬೆಳೆ ನಾಶ ಮಾಡುತ್ತಿದ್ದುದರಿಂದ ಅವನ್ನೆಲ್ಲಾ ಸೆರೆಹಿಡಿದು ಬೇರೆ ಕಡೆಗೆ ಸಾಗಿಸುವ ಕಾರ್ಯಾಚರಣೆ ನಡೆಸಲು ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂಬುದು ಪ್ರಾಥಮಿಕ ಹಂತದ ತನಿಖೆ ವೇಳೆ ದೃಡಪಟ್ಟಿದೆ.
ರಾಮು, ಯಶೋಧ ಮಂಜ, ಮಂಚೇಗೌಡ ಮತ್ತು ಐಯ್ಯಂಗಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ ಹಾಗೂ ರಾಮಾನುಜ ಐಯ್ಯಂಗಾರ್ ಎಂಬಿಬ್ಬರನ್ನು ಅರಣ್ಯ ಇಲಾಖೆಯಿಂದ ಬಂದಿಸಲಾಗಿದೆ ಡಿಎಫ್ಒ ಬಸವರಾಜು ಮಾತನಾಡಿ ಒಂದೇ ಬ್ಯಾಗ್ನಲ್ಲಿ ಮಂಗಗಳನ್ನು ತುಂಬಿದ್ದರಿAದ ಬಹುಶಃ ಅವು ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ವಿವರಿಸಿದರು.
Leave a Comment