ಮುಂಡಗೋಡ : ಲಾರಿ ಚಾಲಕ ಕೈ-ಕಣ್ಣು ಕಟ್ಟಿ ತಾಲೂಕಿನ ಕಾತೂರ ಗ್ರಾಮದಿಂದ ಬೊಲೆರೋದಲ್ಲಿ ಅಪಹರಣ ಮಾಡಿ. ಆತನ ಬಳಿ ಇದ್ದ 22 ಸಾವಿರ ರೂ. ಹಣವನ್ನು ದೋಚಿಕೊಂಡು ಹುಬ್ಬಳ್ಲಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬಳಿ ನಡೆದಿದೆ.
ಯಲ್ಲಾಪುರ ಯಾಲೂಲಿನ ಮಂವಿಕೇರಿಯ ಅಬ್ದುಲ್ ಪೀರಸಾಬ ಶೇಖ್ ದರೋಡಗೊಳಗಾದ ಲಾರಿ ಚಾಲಕ. ಶಿರಸಿಯಿಂದ ಹುಬ್ಬಳ್ಲಿ ಕಡೆಗೆ ಹೊರಟಿದ್ದ ಲಾರಿಯನ್ನು ನಾಲ್ಕು ಜನರ ತಂಡ ಬೊಲೆರೋದಿಂದ ಹಿಂಬಾಲಿಸಿ. ಕಾತೂರ ಗ್ರಾಮದ ಸ್ಮಶಾನದ ಹತ್ತಿರ ರಸ್ತೆ ಬದುಗೆ ಮೂತ್ರ ವಿಸರ್ಜನೆಗೆಂದು ಲಾರಿಯಿಂದ ಜಾಲಕ ಇಳಿದ ಸಂದರ್ಭದಲ್ಲಿ ಆತನನ್ನು ಅಡ್ಡಗಟ್ಟಲಾಗಿದೆ.
ಕೈ-ಕಣ್ಣು ಬಟ್ಟಯಿಂದ ಕಟ್ಟಿ ಬೊಲೆರೋದಲ್ಲಿ ತುಂಬಿಕೊAಡು 22 ಸಾವಿರ ರೂ. ಕಿತ್ತುಕೊಂಡಿದ್ದಾರೆ. ಅಷ್ಟೇ ಅಲದೇ ಚಾಲಕನ ಮೇಲೆ ಹಲ್ಲೇಯನ್ನು ಮಾಡಿ. ಹುಬ್ಬಲ್ಳಿಯಲ್ಲಿ ಬಿಟ್ಟು ತೆರಳಿದ್ದಾರೆ, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಲಾರಿ ಚಾಲಕ ಅಪಹರಣಕಾರರನ್ನು ನೋಡಿದರೆ ಗುರುತಿಸುವುದಾಗಿ ಹೇಳಿದ್ದಾನೆ. ಪಿಡಸ್ಐ ಎನ್ .ಡಿ. ಕಲ್ಲಣ್ಣವರ ಮುಂದಿನ ತನಿಖೆ ಕೈಗೊಂಡಿದ್ದಾರೆ.
Leave a Comment