ಕಾರವಾರ : ಜಿಲ್ಲೆಯ ಸರ್ಕಾರಿ, ಅನುದಾನಿ ಮತ್ತು ಖಾಸಗಿ ಕಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲೀಂ ಕ್ರಿಶ್ಚಿಯನ್, ಜೈನ್, ಭೌದ್ಧ, ಪಾರ್ಸಿ ಸಿಖ್ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಐಐಟಿ, ಎನ್ಐಐಟಿ, ಎನ್ಐಟಿ, ಐಐಎಮ್, ಐಐಎಸ್ಇಆರ್, ಎಐಐಎಮ್ ಎಸ್, ಎನ್ ಎಲ್ ಯು, ಐಎನ್ಐ ಮತ್ತು ಎಲ್ಯ ಎಸ್ ಎಲ್ ಎ ಕೋರ್ಸುಗಳಿಗೆ ಸಂಬAಧಿಸಿದAತೆ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿವ ವಿದ್ಯಾರ್ಥಿಗಳಿಗೆ ಕೋರ್ಸಗಳ ಅವಧಿಯಲ್ಲಿ ಒಂದು ಬಾರಿ ತಲಾ 2 ಲಕ್ಷರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದ್ದು,
ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು https://dom.karnataka.gov.in/ ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವರು ಆನ್ ಲೈನ್ ನೋಂದಣಿ ಮಾಡಿ ನಂತರ ಆನ್ ಲೈನ್ ಪ್ರತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ, 20ನೇ ಮಹಡಿ ವಿ.ವಿ ಮುಖ್ಯಗೋಪುರ, ಡಾ.ಬಿ.ಆರ್ ಅಂಬೇಡ್ಕರ್ ವೀಧಿ ಬೆಂಗಳೂರು -560 001 ಕ್ಕೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್ ಸೈಟ್ https://dom.karnataka.gov.in/ ಅಥವಾ ಆಯಾ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್. ಪುಷಷೋತ್ತಮ ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment