ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಟ್ಕಳ ಮೂಲದ ಇರ್ವರು ತಮ್ಮನನ್ನ ಅಪಹರಣ ಮಾಡಿದ್ದಾರೆ ಎಂದು ಅಣ್ಣ ಮಹಮ್ಮದ್ ರಿಯಾಜ್ ಖಾಜಿ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆಮಹ್ಮಮದ್ ಸಾಹೈಲ್ಪೆಶವಾವ ಆರೋಪಿತನಾಗಿದ್ದಾನೆ.
ಯಾಸೀರ್ ಖಾಜಿಯು ಮಹ್ಮದ್ ಸಾಹೆಲ್ ಪೆಶಮಾಮ್ ಜೊತೆ 4 ಲಕ್ಷ ಹಣ ಪಡೆದಿದ್ದು, ಕೇವಲ ಒಂದುವರೆ ಲಕ್ಷ ವಾಪಾಸ್ಸು ನೀಡುವುದಿತ್ತು. ಅದರ ಸಲುವಾಗಿ ಸೋಮವಾರ ಮನೆಯಹತ್ತಿರ ಬಂದು ಹಣವನ್ನು ಕೇಳಿದ್ದಾರೆ. ಸ್ವಲ್ಪ ದಿನ ಬಿಟ್ಟು ಹಣವನ್ನು ನೀಡುತ್ತೆನೆಂದು ಯಾಸೀರ್ ಖಾಜಿಯು ಹೇಳಿದರೂ ತನಗೆ ಈಗಲೇ ಹಣ ಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ.

ಎಂದು ಯಾಸೀರ್ ಖಾಜಿಯ ಅಣ್ಣ ಮಹ್ಮದ ರಿಯಾಜ್ ಖಾಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶಿಘ್ರಗತಿಯಲ್ಲಿ ನಡೆಸಿ ವಾಹನ ಸಮೇತ ಇರ್ವರನ್ನು ವಶಕ್ಕೆ ಪಡೆದಿದ್ದಾರೆ
Leave a Comment