ಕಾರವಾರ : ಯಾವುದೇ ಹಣದ ವ್ಯವಹಾರವನ್ನು ನಡೆಸದಿದ್ದರೂ ನೌಕಾನೆಲೆಯ ಅಧಿಕಾರಿಯೋರ್ವರ ಕ್ರೆಡಿಟ್ ಕಾರ್ಡ್ ನಿಂದ 77,418 ರೂ ಡೆಬಿಟ್ ಆಗಿರುವ ಬಗ್ಗೆ ನಗರದ ಸಿಇಎನ್ ಅಪರಾಧ ವಿಭಾಗದ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರವಾರ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ಉದ್ಯೋಗದಲ್ಲಿರುವ 31 ವರ್ಷದ ಸುನೀಲಕುಮಾರ ಮಾನಸಿಂಗ್ ಎಂಬುವವರೇ ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವ್ಯಕ್ತಿಯಾಗಿದ್ದಾರೆ. ಇವರು ಕಾರವಾರ ನಗರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಆಗಮಿಸಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಕಳೆದ ಜುಲೈ 9 ರಂದು ಮಧ್ಯಹ್ನ 12:40 ರ ಸುಮಾರಿಗೆ ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಂದ 77418 ರೂ.
ಹಣವು ಡೆಬಿಟ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ನಾನು ಯಾವುದೇ ಹಣದ ವ್ಯವಹಾರವನ್ನು ಮಾಡದಿದ್ದರೂ ತನ್ನ ಖಾತೆಯಿಂದ ಹಣ ಲಪಟಾಯಿಸಿರುವ ಆರೋಪಿತರ ಮೇಲೆ ಸುಕ್ತ ಕ್ರಮ ಕೈಗೊಳ್ಳವಂತೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಈಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಕ್ರೆöÊಂ ಪೊಲೀಸ್ ಠಾಣೆಯ ಪಿಐ,. ನಿತ್ಯಾನಂದ ಪಂಡಿತ ತನಿಖೆ ಕೈಗೊಂಡಿದ್ದಾರೆ.
Leave a Comment