ಗಣೆಶೊತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಹೊನ್ನಾವರ: ತಾಲೂಕಿನ ಮಂಕಿ ಬಣಸಾಲೆಯ ಸಾರ್ವಜನಿಕ ಗಣೆಶೊತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಜರುಗಿತು. ಅಧ್ಯಕ್ಷರಾಗಿ ಆನಂದ ನಾಯ್ಕ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಗಿರೀಶ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ ನಾಯ್ಕ, ಸಹ ಕಾರ್ಯದರ್ಶಿಯಾಗಿ ಸತೀಶ ನಾಯ್ಕ, ಖಜಾಂಚಿಯಾಗಿ ರಾಘವೇಂದ್ರ ನಾಯ್ಕ ಸಹ ಖಜಾಂಚಿಯಾಗಿ ಮನು ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ವಿನಾಯಕ ಭಟ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉತ್ಸವವನ್ನು ಸರ್ಕಾರದ ಮಾರ್ಗಸೂಚಿಯಂತೆ ಮಾಡಲು ತಿರ್ಮಾನಿಸಲಾಯಿತು.