ಉತ್ತರ ಪ್ರದೇಶದ ಕಾನ್ಪುರದಲ್ಲಿ ಜೈ ಶ್ರೀ ರಾಂ ಘೋಷಣೆ ಕೂಗು ವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಟೋ ಚಾಲಕ ಮೇಲೆ ಹಲ್ಲೆ ನಡೆಸಿದ ಆರೋಪದ ಮೆಲೆ ಭಜರಂಗ ದಳ ನಾಯಕ ಅಜಯ್ ಬಂದ್ವಾಳ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕನ ಮೇಲೆ ನಡೆದ ಹಲ್ಲೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಸಂತ್ರಸ್ತ ಅಫ್ಸರ್ ಅಹಮದ್ಗೆ ಗುಂಪು ಥಳಿಸುವ ವೇಳೆ, ಅಪ್ರಾಪ್ತ ವಯಸ್ಸಿನ ಬಾಲಕಿ ಅಳುತ್ತಿದ್ದ ದೃಶ್ಯ ಈ ವಿಡಿಯೋದಲ್ಲಿದೆ. ಈ ದೃಶ್ಯ ಆಧರಿಸಿ ಪೊಲೀಸರು ಅಜಯ್, ಅಮನ್ ಗುಪ್ತಾಮತ್ತು ರಾಹುಲ್ ಕುಮಾರ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment