ಶ್ರೀನಗರ : ದೇಶದ ಅತಿದೊಡ್ಡ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಶ್ರೀನಗರದ ದಾಲ್ ಸರೋವರದಲ್ಲಿನ ಹೌಸ್ಬೋಟ್ ಒಂದರಲ್ಲಿ ಎಟಿಎಂ ಕೇಂದ್ರ ಆರಂಬೀಸಿದೆ ಇದು ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಆಕರ್ಷಣಿಯ ಕೇಂದ್ರ ಬಿಂದುವಾಗಿರುತ್ತದೆ.

ಆಗಸ್ಟ್ 16 ರಂದು ಎಸ್ಬಿಐ ಮುಖ್ಯಸ್ಥ ದಿನೇಶ್ ಖಾರಾ ಅವರು ಈ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಪ್ರವಾಸಿಗರ ಹಗೂ ಸ್ಥಳೀಯರ ಅನುಕೊಲಕ್ಕಾಗಿ ಎಟಿಎಂ ಕೇಂದ್ರ ಆರಂಬಿಸಿರುವುದಾಗಿ ಬ್ಯಾಂಕ್ ಟ್ವಿಟ್ ಮಾಡಿದೆ. ಇದರಿಂದ ಸ್ಥಳೀಯರ ದೀಘಕಾಲದ ಆಶೋತ್ತರ ಈಡೇರಿದೆ. ದಾಲ್ಸರೋವರದಲ್ಲಿ ಈಗಾಗಲೇ ದೋಣಿಯಲ್ಲಿ ತರಕಾರಿ ಮಾರುಕಟ್ಟೆ ಹಾಗೂ ಅಂಚೆಕಚೇರಿಗಳಿದ್ದು ಇದೀಗ ತೇಲುವ ಎಟಿಎಂ ಕೇದ್ರ ಪ್ರವಾಸಿಗರ ಮತ್ತೊಂದು ಆಕರ್ಷಣೀಯ ಕೇಂದ್ರವಾಗಿದೆ.
Leave a Comment