ಯಲ್ಲಾಪುರ: ತಾಲೂಕಿನ ಉಚಗೇರಿ ಗ್ರಾಮದ ಬಿಬ್ನಳ್ಳಿಯಲ್ಲಿ ವ್ಯಕ್ತಿಯೊಬ್ಬರು ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತರಾದ ದುರ್ಘಟನೆ ನೆಡೆದಿದೆ.
ಮೃತ ವ್ಯಕ್ತಿಯನ್ನು ಲಕ್ಷ್ಮೀನಾರಾಯಣ ರಾಮಚಂದ್ರ ಹೆಗಡೆ (52) ವರ್ಷ ಎಂದು ಗುರುತಿಸಲಾಗಿದೆ. ಇವರು ತಮ್ಮ ತೋಟದಲ್ಲಿರುವ ಚೌಡಿಮನೆಗೆ ಕೈಮುಗಿಯಲು ಹೋದವರು ಮನೆಗೆ ಬಾರದೇ ಇರುವಾಗ, ಮಗ ಗಣೇಶ ಹೆಗಡೆ ಸುತ್ತಲೂ ಹುಡುಕಿದರೂ ಕಾಣದೆ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸೋಮವಾರ ಸ್ಥಳಕ್ಕೆ ಬಂದ ಪೋಲೀಸರು ಸೇರಿ ಹುಡುಕಿದಾಗ ತೋಟದಲ್ಲಿರುವ ಬಾವಿಯಲ್ಲಿ ಮೃತ ವ್ಯಕ್ತಿಯ ಶವ ಕಂಡು ಬಂದಿದ್ದಾಗಿ ತಿಳಿದು ಬಂದಿದೆ.
ಈತನು ಕಾಲು ಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಪೋಲಿಸ ರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ
Leave a Comment