ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿ ಕ್ರಾಸ್ ಬಳಿ ಅತಿವೇಗ ಹಾಗೂ ನಿಷ್ಕಾಲಜಿಯಿಂದ ಬೈಕ್ ಚಲಾಯಿಸಿಕೊಂಡು ಬಂದು ಎದುರುಗಡೆ ಬರುವ ಲಗೇಜ್ ರಿಕ್ಷಾದ ಹಿಂಬದಿಯ ಟೈಯರ್ ಭಾಗದಲ್ಲಿ ಗುದ್ದಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ವರದಿಯಾಗಿದೆ.
ಅಪಘಾತದ ತಿವ್ರತೆಗೆ ದ್ವೀಚಕ್ರವಾಹನ ಚಾಲನೆ ಮಾಡುತ್ತಿದ್ದ ಧಾರವಾಡ ಮೂಲದ ಸದಾನಂದ ಹೊರಕೇರಿ, ಹಾಗೂ ಹಿಂಬದಿ ಸವಾರ ಕಲ್ಮೇಶ ಇರ್ವರಿಗೆ ತಲೆ ಹಾಗೂ ಕೈ ಭಾಗದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಈ ಸಂಭದ ಆಟೋ ಚಾಲಕ ಆನಂದ ನಾಯ್ಕ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
Leave a Comment