ಹೊನ್ನಾವರ ಕಾಸರಕೋಡನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ಕಾಮಗಾರಿಗೆ ಹೊನ್ನಾವರ ಪ್ರೈವೇಟ್ ಕಂಪನಿ ಯಲ್ಲಿ ಕಾರ್ಯನಿರ್ವಹಿಸಲು ಅದೇ ಗ್ರಾಮದ ೩೯ ಜನರು ಪ್ರತಿನಿತ್ಯ ಸಾರ್ವಜನಿಕ ರಸ್ತೆ ಮಾರ್ಗದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಎರಡು ದಿನದಿಂದ ರಸ್ತೆಯಲ್ಲಿ ತಡೆದು ಅವಾಚ್ಯ ಶಬ್ದದಿಂದ ನಿಂದನೆ ಮಾಡುತ್ತಿದ್ದಾರೆ.
ಅಲ್ಲದೇ ಗಂಡಸರಿಗೆ ಸೀರೆ ತೊಡುವಂತೆ ಮಹಿಳೆಯರಿಗೆ ಬಟ್ಟೆ ಕಳಚುವಂತೆ ನಿಂದನೆ ಮಾಡುತ್ತಿದ್ದಾರೆ. ಈ ಘಟನೆಗೆ ಸಂಭದಿಸಿದಂತೆ ಪೋಲಿಸ್ ಠಾಣಿಯಲ್ಲಿ ದೂರು ನೀಡಲಾಗಿದೆ. ನಾವೆಲ್ಲರು ದಿನಗೂಲಿ ನೌಕರರಾಗಿದ್ದು, ನಮ್ಮ ಜೀವನ ನಿರ್ವಹಣೆಗೆ ಕೆಲಸ ಮಾಡುವುದು ಅನಿವಾರ್ಯವಾಗಿದೆ.
ಅಲ್ಲದೇ ನಮಗೆ ಕಾನುನು ರೀತಿಯಲ್ಲಿ ಕೆಲಸ ಮಾಡಲು ಸಂವಿಧಾನ ರೀತಿಯಲ್ಲಿ ಅವಕಾಶವಿದೆ. ಸಾರ್ವಜನಿಕ ರಸ್ತೆಯಲ್ಲಿ ನಾವು ಸಂಚರಿಸಲು ಅವಕಾಶ ನೀಡದೇ ನಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತೆ ನಡೆದುಕೊಳ್ಳುವವರ ವಿರುದ್ದ ಹಾಗೂ ಮಾನಹಾನಿ ಮಾಡುವವರ ವಿರುದ್ದ ಕ್ರಮ ಕೈಗೊಂಡು ನಾವು ಕೆಲಸಕ್ಕೆ ರಕ್ಷಣೆ ನೀಡುವಂತೆ ಕೋರಿ ತಹಶೀಲ್ದಾರರಿಗೆ ೩೯ ಜನ ಕಾರ್ಮಿಕರು ಮನವಿ ಸಲ್ಲಿಸಿದ್ದಾರೆ.
ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ವೇಳೆ ಸಂತೋಷ ಮೇಸ್ತ, ಚಂದ್ರ ಮೇಸ್ತ, ರಾಘವೇಂದ್ರ, ಉದಯ, ವಿನಾಯಕ ಸೇರಿದಂತೆ ಮೂವತ್ತಕ್ಕೂ ಅಧಿಕ ಕಾರ್ಮಿಕರು ಉಪಸ್ಥಿತರಿದ್ದರು.
Leave a Comment