ಹೊನ್ನಾವರ : ತಾಲೂಕಿನ ಮುಗ್ವಾದ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ಕಛೇರಿಯನ್ನು ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು ತಾಲೂಕಿನ ಹಾಗೂ ನೆರೆ ತಾಲೂಕಿನ ಸೇವಾ ಸಹಕಾರಿ ಸಂಘಗಳು ನಷ್ಟದಿಂದ ಕೂಡಿದೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ನವರು ಈ ಎಲ್ಲ ಸೇವಾ ಸಹಕಾರಿ ಸಂಘದ ವ್ಯವಹಾರ ಮತ್ತು ಕಾರ್ಯಚಟುವಟಿಕೆ ಬಗ್ಗೆ ಗಮನಕೊಡಬೇಕಿದೆ.
ಸಂಘದ ಶೇರುದಾರರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ನಾನು ಯಾವತ್ತೂ ಸಹಕಾರಿ ಕ್ಷೇತ್ರದಲ್ಲಿ ಹಸ್ತ ಕ್ಷೇಪ ಮಾಡಿಲ್ಲ. ಸಹಕಾರಿ ಕ್ಷೇತ್ರದ ರಾಜಕಾರಣದಿಂದಲೂ ದೂರವೇ ಇದ್ದೇನೆ. ನೂತನ ಕಛೇರಿ ಹೊಂದಿದ ಮುಗ್ವಾ ವಿ. ಎಸ್. ಎಸ್. ಬ್ಯಾಂಕ್ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೆ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕ, ಮುಗ್ವಾ ಗ್ರಾಮ ಪಂಚಾಯತ ಅಧ್ಯಕ್ಷೆ ಗೌರಿ ಕೃಷ್ಣ ಅಂಬಿಗ, ಕೆ. ಡಿ. ಸಿ. ಸಿ. ಬ್ಯಾಂಕ್ ಎಂ. ಡಿ. ಆರ್. ಜಿ. ಭಾಗ್ವತ, ಎಸ್. ಆರ್. ಎಲ್ ಸಮೂಹ ಸಂಸ್ಥೆಯ ವೆಂಕಟರಮಣ ಹೆಗಡೆ ಕವಲಕ್ಕಿ, ಸಹಕಾರಿ ಸಂಘಗಳ ಸಹಾಯಕ ನಿಬಂದಕರಾದ ನಾಗಭೂಷಣ ಚಂದ್ರಶೇಖರ ಕಲ್ಮನೆ, ಮುಗ್ವಾ ವಿ. ಎಸ್. ಎಸ್. ಬ್ಯಾಂಕ್ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ, ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಸಂಘದ ಶೇರುದಾರರು ಉಪಸ್ಥಿತರಿದ್ದರು.
Leave a Comment