ಹೊನ್ನಾವರ; ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿರುವ ಕುರಿತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿಗೆ – ಸಂದೇಶ ಸುಭಾಷ ಬಾಂದುರ್ಗಿ, ಜೋಯಿಡಾ ತಾಲೂಕಿಗೆ–ಪುರುಷೋತ್ತಮ ಕಾಮತ್,ದಾಂಡೇಲಿ ತಾಲೂಕಿಗೆ– ಎಚ್ ಬಿ ಪರಶುರಾಮ,ಅಂಕೋಲಾ ತಾಲೂಕಿಗೆ ಮದೇವ ಬೀರು ಗೌಡ,ಕುಮಟಾ ತಾಲೂಕಿಗೆ– ಹರಿಶ್ಚಂದ್ರ ಕೃಷ್ಣ ಭಟ್ಟ, ಹೊನ್ನಾವರ ತಾಲೂಕಿಗೆ – ಹರಿಶ್ಚಂದ್ರ ಗಣಪತಿ ನಾಯ್ಕ, ಭಟ್ಕಳ ತಾಲೂಕಿಗೆ ನಾರಾಯಣ ಜಟ್ಟಾ ನಾಯ್ಕ, ಮಂಕಿ ಪಟ್ಟಣಕ್ಕೆ ಅಣ್ಣಪ್ಪ ಹನುಮಂತ ನಾಯ್ಕ, ಶಿರಸಿ ತಾಲೂಕಿಗೆ ಪ್ರವೀಣ ಹೆಗಡೆ, ಸಿದ್ದಾಪುರ ತಾಲೂಕಿಗೆ ಪಾಂಡುರಂಗ ಗಣಪತಿ ನಾಯ್ಕ, ಯಲ್ಲಾಪುರ ತಾಲೂಕಿಗೆ ಅಣ್ಣಪ್ಪ ಡಿ ನಾಯ್ಕ, ಮುಂಡಗೋಡ ತಾಲೂಕಿಗೆ ಪ್ರದೀಪಗೌಡ ದ್ಯಾಮನಗೌಡ ಶಿವನಗೌಡರ್, ಬನವಾಸಿಗೆ ಭದ್ರಗೌಡ ಬಿ ಕರಡೇರ್, ಕಾರವಾರ ತಾಲೂಕಿಗೆ ಸಂತೋಷ ಚಂದ್ರಕಾಂತ ನಾಯ್ಕ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ರೈತ ನಾಯಕರಾದ ಸಚಿನ್ ಮೀಗಾರವರ ಆದೇಶದಂತೆ ಅಧ್ಯಕ್ಷರುಗಳ ನೇಮಕ ಮಾಡಿದ್ದು ತಮಗೆ ನೀಡುತ್ತಿರುವ ಈ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಮತ್ತು ಕಿಸಾನ್ ಘಟಕದ ಮೂಲಕ ರೈತರನ್ನು ಪಕ್ಷದಲ್ಲಿ ಸಂಘಟಿಸಲು ಶ್ರಮಿಸಬೇಕು ಮತ್ತು ಈ ನಿಟ್ಟಿನಲ್ಲಿ ಕ್ಷೇತ್ರದ ಮುಖಂಡರುಗಳ ಸಹಕಾರದೊಂದಿಗೆ ಜಿಲ್ಲಾ ಮತ್ತು ರಾಜ್ಯ ಕಿಸಾನ್ ಕಾಂಗ್ರೆಸ್ ನಿರ್ದೇಶನದಂತೆ ತಾಲೂಕು ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಶಿವಾನಂದ ಹೆಗಡೆ ತಿಳಿಸಿದ್ದಾರೆ.
Leave a Comment