ಭಟ್ಕಳ: ಬಹಿರ್ದೆಸೆ ಹೋಗಿ ಬರುವ ವೇಳೆ ರೈಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಬಸ್ತಿ ರೈಲ್ವೆ ಬ್ರಿಡ್ಜ್ ಸಮೀಪ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮ ನಾಯ್ಕ ಎಂದು ತಿಳಿದು ಬಂದಿದ್ದು. ಈತ ಸಾರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದು. ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯಿಂದ ಬಹಿರ್ದೆಸೆ ಹೋಗಿ ಬರುವ ವೇಳೆ ಹೋದವನು ಬಸ್ತಿ ರೈಲ್ವೆ ಬ್ರಿಡ್ಜ್ ನ ಹಳಿಯ ಮೇಲೆ ಮನೆಗೆ ನಡೆದುಕೊಂಡು ಬರುವ ವೇಳೆ ಯಾವುದೋ ರೈಲು ತಲೆಗೆ ಬಡಿದು ಭಾರಿ ಸ್ವರೂಪದ ಗಾಯದಿಂದ ಸಾವನ್ನಪ್ಪಿದ್ದಾರೆ .
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment