• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವದ್ಯೋಗದಿಂದ ಸ್ವಾವಲಂಬಿಯಾಗಿ:ವನಜಾಕ್ಷಿ ಹೆಬ್ಬಾರ

September 28, 2021 by Jayaraj Govi Leave a Comment

IMG 20210927 183747

ಯಲ್ಲಾಪುರ: ಮಹಿಳೆಯರು ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಞಾನಉಂಟಾಗಿ ಕ್ರಿಯಾಶೀಲತೆಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬಹುದು. ಗ್ರಾಮೀಣ ಭಾಗದ  ಮಹಿಳೆಯರಿಗೆ ತರಭೇತಿ ನೀಡಿ ಸ್ವದ್ಯೋಗದಲ್ಲಿ ತೊಡಗಲು ಪ್ರೋತ್ಸಾಹ ನೀಡುತ್ತಿರುವ  ದೇಶಪಾಂಡೆ ಪೌಂಡೇಶನÀ ಕಾರ್ಯ ಶ್ಲಾಘನೀಯ ಎಂದು ಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಹೇಳಿದರು. ಅವರು  ಪಟ್ಟಣದ ಅಡಿಕೆ ಭವನದಲ್ಲಿ  ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ ವತಿಯಿಂದ ಅಯೋಜಿಸಿದ್ದ ನವೋದ್ಯಮಿಗಳಿಗೆ ತರಭೇತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

IMG 20210927 WA0149

ಕಾರ್ಯ ನಿರತ ಪತ್ರಕರ್ತ ರ ಸಂಘದ ಖಜಾಂಚಿ ಪ್ರಭಾವತಿ ಗೋವಿ ಮಾತನಾಡಿ ಇಂದು ಆನ್ ಲೈನ ಮಾರುಕಟ್ಟೆಯ ಅಬ್ಬರದಲ್ಲಿ ವ್ಯವಹಾರಿಕವಾಗಿ ವಿಶ್ವಾಸ ಗಳಿಸುವದು ಕಷ್ಟಸಾಧ್ಯವಾದರೂ ಕೇವಲ ಲಾಭವನ್ನಷ್ಟೇ ನೀರಿಕ್ಷಿಸದೇ ಗುಣ ಮಟ್ಟಕ್ಕೆ ಆದ್ಯತೆ ನೀಡಿದರೆ ಯಶಸ್ಸು ಖಂಡಿತ. ಒಂದೇ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ಹಲವರು ಮುಂದಾಗದೇ ಪರಸ್ಪರ ಪೂರಕ ಉತ್ಪನ್ನಗಳತ್ತ ಮುಖಮಾಡಿದರೆ ಸಹಕಾರದಿಂದ ಆರೋಗ್ಯಕರ ಪೈಪೋಟಿಯಿಂದ ಲಾಭಗಳಿಸಲು ಸಾಧ್ಯ ಎಂದರು.


ಸ್ವದ್ಯೋಗದಲ್ಲಿ ತೊಡಗಿಕೊಂಡು ಯಶಸ್ವಿಯಾದ ವನಿತಾ ಭಟ್ಟ ಮಾತನಾಡಿ ತರಭೆತಿ ಪಡೆದು ಹಾಗೆ ಕೂರದೇ  ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ಉತ್ಪಾದನೆಗೆ ಆಸಕ್ತಿ ತೋರಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಪಡೆಯಲು ಹಿಂಜರಿಯದೇ ಕಾರ್ಯನ್ಮುಖವಾದಾಗ ಮಾತ್ರ ಸ್ವಾವಲಂಬಿಯಾಗಲು ಸಾಧ್ಯ . ಕುಟುಂಬದವರ ಸಹಭಾಗಿತ್ವದಿಂದ ಆರ್ಥಿಕವಾಗಿ, ಮಾನಸಿಕವಾಗಿ ಸಧೃಡ ಬದುಕಾಗಬಹುದಾಗಿದೆ.

ನಾನು ದೇಶಪಾಂಡೆ ಪೌಂಡೇಶನ ಅವರ ಸತತ ಮಾರ್ಗದರ್ಶನ ಮನೆಯವರ ಪ್ರೋತ್ಸಾಹದಿಂದ ಉಪ್ಪಿನಕಾಯಿ ಉದ್ಯಮದದಲ್ಲಿ .ತೃಪ್ತಿ ಕಾಣುತ್ತಿದ್ದೇನೆ ಎಂದು ತಮ್ಮ ಅನುಭವನ್ನು ಹಂಚಿಕೊAಡರು.ಇನ್ನೋರ್ವ ಗೃಹದ್ಯೋಮಿ ಪ್ರೇಮಾ ಜೋಶಿ ಇಂದು ಗೃಹೋದ್ಯಮದಲ್ಲಿ ತೊಡಗಿಕೊಂಡವರಿಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯಗಳು ಸಿಗುತ್ತವೆ. ಹೆಚ್ಚಿನ ಮಹಿಳೆಯರು ತರಭೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕೆನರಾ ಬ್ಯಾಂಕ್ ಮ್ಯಾನೇಜರ ಅಲಗಾ  ಶುಭ ಹಾರೈಸಿದರು.  ಜಯರಾಜ ಗೋವಿ ಉಪಸ್ಥಿತರಿದ್ದರು. ಪೌಂಡೇಶನ್ ತರಭೇತುದಾರ ಇಮ್ಯಾನುಯಲ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸುಮಾರು ೩೦ ಜನರು ತರಭೇತಿ ಪಡೆದುಕೊಂಡರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: ದೇಶಪಾಂಡೆ ಪೌಂಡೇಶನ ಅವರ ಸತತ ಮಾರ್ಗದ, ಸ್ವದ್ಯೋಗದಲ್ಲಿ ತೊಡಗಿಕೊಂಡು ಯಶಸ್ವಿ

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...