• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಕಟ್ಟಡವನ್ನು ಆಡುಕಳ ಗ್ರಾಮದಲ್ಲಿ ನಿರ್ಮಿಸುವಂತೆ ಗ್ರಾಮಸ್ತರ ಆಗ್ರಹ;ಬೇರಡೆ ಗ್ರಾ.ಪಂ. ಮಾಡಲು ಮುಂದಾದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

October 5, 2021 by Vishwanath Shetty Leave a Comment

ಹೊನ್ನಾವರ; ಮಂಕಿ ಪಟ್ಟಣ ಪಂಚಯತ ರಚನೆಯಾದ ಹಿನ್ನಲೆಯಲ್ಲಿ ಅಸ್ಥಿತ್ವ ಕಳೆದುಕೊಂಡಿರುವ ಮಂಕಿ (ಸಿ) ಚಿತ್ತಾರ ಗ್ರಾಮ ಪಂಚಾಯತ ಬದಲಿಗೆ ಪಟ್ಟಣಪಂಚಾಯತಗೆ ಸೇರದೇ ಉಳಿದ ಗ್ರಾಮಗಳನ್ನು ಸೇರಿಸಿ ನೂತನ ಪಂಚಾಯತ ರಚನೆಯ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ನೂತನ ಗ್ರಾಮಪಂಚಾಯತ ಕಛೇರಿಯನ್ನು ಬಹುಸಂಖ್ಯಾತ ಜನರಿರುವ ಪ್ರದೇಶದಿಂದ ದೂರ ಒಯ್ದು ಮೂಲ ಸೌಕರ್ಯ ವಂಚಿತವಾಗಿರುವ ಹಡಿಕಲ್ ವ್ಯಾಪ್ತಿಯಲ್ಲಿ ನಿರ್ಮಿಸಲು ಮುಂದಾಗಿರುವುದು ಆಡುಕಳ, ದಬ್ಬೋಡ ಸೇರಿದಂತೆ ಹಲವು ಗ್ರಾಮಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ನೂತನ ಪಂಚಾಯತಗೆ ಒಳಪಡುವ ಆಡುಕಳದಲ್ಲಿ ಪಂಚಾಯತ ಕಛೇರಿಗೆ ಅವಶ್ಯವಾಗಿ ಬೇಕಾಗಿರುವ ದೂರವಾಣಿ ಸಂಪರ್ಕ, ಅಂತರ್ಜಾಲ ವ್ಯವಸ್ಥೆ, ಉತ್ತಮವಾದ ಸ್ಥಳ ಸೌಕರ್ಯವಿದ್ದು, ಪಟ್ಟಣ ಪ್ರದೇಶದಿಂದ ಕೇವಲ ೬ ಕಿ. ಮೀ ಅಂತರದಲ್ಲಿರುತ್ತದೆ.  ಅದಲ್ಲದೇ ಚಿತ್ತಾರ ಗ್ರಾಮ ಪಂಚಾಯತಗೆ ಆಡುಕಳ, ದಬ್ಬೋಡ, ಹಡಿಕಲ್, ಅಸಿಕೇರಿ, ಅಡಿಕೆಕುಳಿ ಮಜರೆಗಳು ಒಳಪಡುತ್ತಿದ್ದು ಸದರಿ ಎಲ್ಲಾ ಮಜರೆಗಳಿಗೆ ಆಡುಕಳವು ಕೇಂದ್ರಸ್ಥಾನವಾಗಿರುತ್ತದೆ. ಚಿತ್ತಾರ ಗ್ರಾಮ ಪಂಚಾಯತದ ಒಳಪಡುವ ಮಜರೆಗಳಲ್ಲಿ ಆಡುಕಳ ಮತ್ತು ದಬ್ಬೋಡ ಗ್ರಾಮಗಳು ಬಹುದೊಡ್ಡ ಮಜರೆಯಾಗಿದೆ ಆದರೆ ಇದನ್ನು ಬಿಟ್ಟು ಅರಣ್ಯ ಅತಿಕ್ರಮಣ ಸಾಗುವಳಿದಾರರೇ ಹೆಚ್ಚಿರುವ ಕುಗ್ರಾಮದಲ್ಲಿ ಪಂಚಾಯತ್ ಕಛೇರಿ ತೆರೆಯಲು ಮುಂದಾಗಿರುವುದರ ಉದ್ದೇಶ ನಮಗೆ ಅರ್ಥವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

IMG20211004173034

ಆಡುಕಳದಲ್ಲಿ ಪಂಚಾಯತ ಕಛೇರಿ ತೆರೆದರೆ ಜನರಿಗಾಗುವ ಅನುಕೂಲ

೧. ಈಗಿರುವ ಚಿತ್ತಾರ ಪಂಚಾತ್ ನಿಂದ ಕೇವಲ ೧ ಕೀಮಿ. ಒಳಗಡೆ ದಬ್ಬೋಡ ಮತ್ತು ಆಡುಗಳ ಗ್ರಾಮ ಇದೆ

೨. ಒಟ್ಟೂ ಜನ ಸಂಖ್ಯೆಯ ಶೇ ೬೦ ರಷ್ಟು ಜನ ಸಂಖ್ಯೆ ದಬ್ಬೋಡ ಮತ್ತು ಆಡುಕಳ ಗ್ರಾಮದಲ್ಲಿದೆ

೩. ಪಂಚಾಯತ ವ್ಯಾಪ್ತಿಯಲ್ಲಿ ಬರುವ ಆಡುಕಳ, ದಬ್ಬೋಡ, ಹಡಿಕಲ್, ಅಸಿಕೇರಿ, ಅಡಿಕೆಕುಳಿ ಕಂದಾಯ ಗ್ರಾಮಗಳ ಎಲ್ಲಾ ಜನರು ಶಾಲೆಗೆ, ರೇಶನ್ ಖರಿದಿಗೆ, ಆಸ್ಪತ್ರೆ, ಬ್ಯಾಂಕ ಎಲ್ಲಾ ರೀಯ ವ್ಯವಹಾರಕ್ಕೆ ಚಿತ್ತಾರ ಮತ್ತು ಮಂಕಿಗೆ ಬರಲೇ ಬೇಕು ಹೀಗಿರುವಾಗ ದಬ್ಬೋಡ ಅಥವಾ ಆಡುಕಳದಲ್ಲಿ ಮಾಡುವುದರಿಂದ ಚಿತ್ತಾರಕ್ಕೆ ಸಮೀಪ ಮಾಡಿದಂತಾಗುತ್ತದೆ.

೪. ಆಡುಕಳ, ದಬ್ಬೋಡ, ಹಡಿಕಲ್, ಅಸಿಕೇರಿ, ಅಡಿಕೆಕುಳಿ ಎಲ್ಲಾ ಗ್ರಾಮಗಳ ಅಂಚೆ ಕಛೇರಿ ಆಡುಕಳದಲ್ಲಿಯೇ ಇದೆ.

೫. ಮೊಬೈಲ್ ಮತ್ತು ಇಂಟರ್ ನೆಟ್ ಸೌಲಭ್ಯ ಈ ಗ್ರಾಮಗಳಲ್ಲಿದೆ.

೬.ದಬ್ಬೋಡ ಆಡುಕಳ ಗ್ರಾಮದಲ್ಲಿಯೇ ೪ ಸದಸ್ಯರು ಆಯ್ಕೆಯಾಗಿರುತ್ತಾರೆ.

ಹಡಿಕಲ್ ನಲ್ಲಿ ಗ್ರಾಮಪಂಚಾಯತ ಕಛೇರಿ ನಿರ್ಮಿಸಿದರೆ ಎದುರಾಗುವ ತೊಂದರೆಗಳು
೧. ಹಡೀಕಲ್ ಗ್ರಾಮದಲ್ಲಿ ಮಾಡಿದರೆ ಅದು ದಟ್ಟ ಅರಣ್ಯದಲ್ಲಿ ಬಹುದೂರದಲ್ಲಿರುವ ಗ್ರಾಮ

೨. ಮಾನ್ಯ ಘನ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಓo. ಈಇಇ ೧೨ ಈWಐ ೨೦೧೯ ಆಚಿಣe: ೦೭.೦೬.೨೦೧೯ ಆದೇಶದಂತೆ ಅಭಯಾರಣ್ಯ ವ್ಯಾಪ್ತಿಗೆ ಬರುವ ಗ್ರಾಮ

೩. ಬಹುಸಂಖ್ಯಾತ ಜನರಿರಿರುವ ದಬ್ಬೋಡ ಮತ್ತು ಆಡುಕಳ ಗ್ರಾಮದವರು ೬ ಕೀ.ಮಿ. ಅರಣ್ಯ ದಾರಿಯಲ್ಲಿ ಕೇವಲ ಪಂಚಾಯತ ಕೆಲಸಕ್ಕಾಗಿ ಹೋಗಬೇಕು, ಖಾಸಗಿ ವಾಹನ ಬಿಟ್ಟರೇ ಓಡಾಟಕ್ಕೆ ಬೇರೆ ಯಾವುದೇ ವಾಹನಗಳಿರುವುದಿಲ್ಲ, ನಡೆದುಕೊಂಡೇ ಹೋಗಬೇಕು

೪. ವಿಧ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಡೀಕಲ್ ಗ್ರಾಮಕ್ಕೆ ಹೋಗಿಬರುವುದು ಕಷ್ಟಕರ.೫. ಹಡೀಕಲ್ ಯಾವುದೇ ನೆಟವರ್ಕ ವ್ಯವಸ್ಥೆ ಇಲ್ಲದ ಪ್ರದೇಶವಾಗಿದೆ.

ಮಳೆಗಾಲದಲ್ಲಿ ಯಾವುದೇ ವಾಹನ ಓಡಾಡಲು ಸಾಧ್ಯವಿಲ್ಲದ ಸ್ಥಳದಲ್ಲಿ ಪಂಚಾಯತಿಯ ನಿರ್ಮಾಣ ಮಾಡಲು ಹೋಗಿರುವುದು ಅವೈಜ್ಞಾನಿಕವಾಗಿದೆ. ಗ್ರಾಮಛಾವಡಿ ಹಾಗೂ ಅಂಚೇ ಕಚೇರಿ ಸೇರಿದಂತೆ ಹಲವು ಕಛೇರಿಗಳು ಒಂದಡೆ ಸಿಗುವ ಸ್ಥಳದಲ್ಲಿ ನಿರ್ಮಿಸಿದರೆ ಅನೂಕೂಲವಾಗುವುದರಿಂದ ನಮ್ಮಲ್ಲಿ ಮಾಡಬೇಕು.
..ಮಂಜು ಗೌಡ ಸ್ಥಳಿಯ ನಿವಾಸಿ

ಪ್ರತಿಯೊಂದು ವಿಷಯಕ್ಕೂ, ಗ್ರಾಮ ಪಂಚಾಯತಿಗೆ ಹೋಗುವುದು ಅನಿವಾರ್ಯ. ಆದರೆ ಜನಸಂಖ್ಯೆ ಹೆಚ್ಚಿರುವುದು ಇಲ್ಲಿಯೆ ಆಗಿದ್ದಾರೆ. ಪಂಚಾಯತಿಗೆ ಅತಿ ಹೆಚ್ಚು ಆದಾಯ ಬರುವುದು ನಮ್ಮ ಭಾಗದಿಂದಲೇ ಆಗಿದೆ. ನಾವು ಬೇರಡೆ ಕೊಂಡ್ಯೊಯಲು ಬಿಡುವುದಿಲ್ಲ.
..ವಿಜಯಲಕ್ಷ್ಮೀ ಹೆಗಡೆ

ನಮ್ಮ ಬೇಡಿಕೆ ಮನ್ನಿಸದೇ ಗ್ರಾಮ ಪಂಚಾಯತಿ ಬೇರಡೆಗೆ ಸ್ಥಳಾಂತರಿಸಿದರೆ, ಎರಡು ಮಜರೆಯವರು ಚುನಾವಣೆ ಬಹಿಷ್ಕಾರ ಮಾಡಲಿದ್ದೇವೆ.
..ಗೊವಿಂದ ಗೌಡ

ಜನರ ಸಮಸ್ಯೆಯನ್ನು ಆಲಿಸಿ ಎಲ್ಲರಿಗೂ ಉಪಯೋಗವಾಗುವಂತಹ ಸ್ಥಳದಲ್ಲಿ ಪಂಚಾಯತಿ ಕಟ್ಟಡ  ಮಾಡಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಬಹುಜನರ ಬೇಡಿಕೆ ಈಡೇರಿಸಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...