ಹೊನ್ನಾವರ: ಪಟ್ಟಣದ ಶಾರದಾಂಬ ದೇವಿ ದೇವಸ್ಥಾನದಲ್ಲಿ ಚಾರೋಡಿ ಮೇಸ್ತ ಸಮಾಜದ ಮಕ್ಕಳಿಗೆ ಸಾಮೋಹಿಕ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು.
150ಕ್ಕೂ ಹೆಚ್ಚು ವರ್ಷದ ಪಟ್ಟಣದ ದೇವಾಲಯ ಎಂದು ಹಿರಿಮೆ ಹೊಂದಿರುವ ಶಾರದಾಂಬ ದೇವಲಾಯದಲ್ಲಿ ನವರಾತ್ರಿಯ ಅಂಗವಾಗಿ 5 ವರ್ಷದೊಳಗಿನ ಸಮಾಜದ ವಿದ್ಯಾರ್ಥಿಗಳಿಗೆ ದಾರ್ಮಿಕ ವಿಧಿ ವಿಧಾನದಂತೆ ಈ ಕಾರ್ಯಕ್ರಮ ನಡೆಯಿತು. 75ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲಕರೊಂದಿಗೆ ಕುಳಿತು ಅಕ್ಕಿಯಲ್ಲಿ ಪ್ರಾರಂಭಿಕವಾಗಿ ದೇವರ ಹೆಸರು ಹಾಗೂ ಕನ್ನಡ ವರ್ಣಮಾಲೆಯ ಹೆಸರು ಬರೆದು ಅಕ್ಷರಭ್ಯಾಸದಲ್ಲಿ ತೊಡಗಿದರು.
ಈ ವೇಳೆ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಮಾತನಾಡಿ ಒರ್ವ ವ್ಯಕ್ತಿಯಲ್ಲಿ ಸಂಸ್ಕಾರಯುತವಾಗಿಡಲು ಶಿಕ್ಷಣ ಬಹುಮುಖ್ಯವಾಗಿದೆ. ಇಂದು ಸಮಾಜದ ವಿದ್ಯಾರ್ಥಿಗಳಿಗೆ ದೇವತೆ ಹೆಸರನ್ನು ಬರೆದು ಚಾಲನೆ ನೀಡಲಾಗುತ್ತಿದೆ. ಶರನವರಾತ್ರಿಯ ಶುಭ ವೇಳೆ ಬರೆದ ಅಕ್ಷರ ಮುಂದೆ ಸುವರ್ಣಾಕ್ಷರವಾಗಲಿದೆ ಎಂದರು.
ಚಾರೋಡಿ ಸಮಾಜದ ಅಧ್ಯಕ್ಷ ಸುಬ್ರಾಯ ಮೇಸ್ತ ಮಾತನಾಡಿ ಸಮಾಜದ ಸಹಕಾರದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ಇದು ಮಕ್ಕಳ ಭವಿಷ್ಯ ಇನ್ನಷ್ಟು ಉನ್ನತ ಸ್ಥಾನಕ್ಕೆ ಹೋಗಲು ಸಹಕಾರಿಯಾಗಲಿದೆ. ಸಮಾಜ ಬಾದಂವರು ಇದನ್ನು ಮುಂದುವರೆಸುವಂತೆ ಕರೆ ನೀಡಿದರು.
ಈ ವೇಳೆ ದೇವಾಲಯದ ಟ್ರಸ್ಟಿಗಳಾದ ಲಕ್ಷಣ ಮೇಸ್ತ, ಅಚ್ಯುತ್ ಮೇಸ್ತ, ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಾಯ ಮೇಸ್ತ, ಪ್ರದೀಪ ಮೇಸ್ತ, ಯೋಗೀಶ ಮೇಸ್ತ, ಉದಯ ಮೇಸ್ತ, ಪ.ಪಂ. ಸದಸ್ಯೆ ಸುಜಾತ ಮೇಸ್ತ, ಶಿಕ್ಷಕಿ ಸಾದನಾ ಬರ್ಗಿ ಸೇರಿದಂತೆ ಸಮಾಜ ಭಾದಂವರು ಉಪಸ್ಥಿತರಿದ್ದರು.
Leave a Comment