ಯಲ್ಲಾಪುರ : ರಾಜ್ಯ ಹಾಗೂ ರಾಷ್ಟç ಎರಡೂ ಕಡೆಯೂ ಆಡಳಿತ ಚುಕ್ಕಾಣಿ ಬಿಜೆಪಿ ಕೈಯಲ್ಲಿದೆ. ಆದನ್ನು ಮೋದಿಯವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಅಂತೆಯೇ ಮುಂಬರುವ ಸ್ಥಳೀಯ ಚುನಾವಣೆಯಿಂದ ಹಿಡಿದು ವಿಧಾನ ಪರಿಷತ್ ಚುನಾವಣೆಯವರೆಗೂ ಕಾರ್ಯಕರ್ತರೆಲ್ಲರೂ ಇನ್ನಷ್ಟು ಶ್ರಮ ವಹಿಸಿ, ಪಕ್ಷ ಕಟ್ಟುವ ಕಾರ್ಯ ಮಾಡಬೇಕು ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ ಪಟೇಲ್ ತಿಳಿಸಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಬಿಜೆಪಿ ಉತ್ತರಕನ್ನಡ ಜಿಲ್ಲಾ ಮಟ್ಟದ ಚುನಾಯಿತ ಪ್ರತಿನಿಧಿಗಳ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಕೇವಲ ಒಂದು ರಾಜಕೀಯ ಪಕ್ಷವಾಗಿರದೆ ಜನಸ್ನೇಹಿ ಪರಿವಾರವಾಗಿ ಬೆಳೆಯುತ್ತಿದೆ. ಪಕ್ಷದ ಕಾರ್ಯಗಳಲ್ಲದೇ ಜನತೆಗೆ ಸಹಾಯಕವಾಗುವಂತಹ ಕಾರ್ಯಗಳನ್ನೂ ಸಹ ಮಾಡಿಕೊಂಡು ಬರುತ್ತಿದೆ. ಪ್ರಧಾನ ಮಂತ್ರಿ ಮೋದಿಯವರ ಜನ್ಮದಿನವನ್ನು ಆಡಂಬರಗೊಳಿಸದೆ, ಸೇವೆ ಹಾಗೂ ಸಮರ್ಪಣೆ ಮೂಲಕ ಅರ್ಥಪೂರ್ಣ ರೀತಿಯಲ್ಲಿ ನೆರವೇರಸಿಕೊಂಡು ಬಂದದ್ದು ಬಿಜೆಪಿ ಕಾಯಕದ ಪರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಎಲ್ಲ ಕಾರ್ಯವನ್ನು ಸಫಲಗೊಳಿಸಿದ ಶ್ರೇಯಸ್ಸು ಬೂತ್ ಮಟ್ಟದಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸಲ್ಲುತ್ತದೆ. ಇದೇ ರೀತಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯ ಗೆಲವನ್ನು ಖಚಿತಪಡಿಸೋಣ. ಅಂತಹ ರೀತಿಯಲ್ಲ ಪಕ್ಷವನ್ನು ಸದೃಢಗೊಳಿಸುವ ಕಾರ್ಯ ಎಲ್ಲರಿಂದ ನಡೆಯಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆÀದ ಒಂದೂವರೆ ತಿಂಗಳಿAದ ಪಕ್ಷ ಸಂಘಟನೆಯ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅಂತೆಯೆ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ೨೦ ದಿನಗಳ ಸೇವೆ ಮತ್ತು ಸಮರ್ಪಣೆ ಎಂಬ ಯೋಜನೆಯಡಿಯಲ್ಲಿ ಅನೇಕ ಉತ್ತಮ ಕಾರ್ಯಗಳು ಸಮಾಜಕ್ಕೋಸ್ಕರ ನಡೆದಿದೆ. ಅಂತೆಯೇ ಮುಂದಿನ ಚುನಾವಣೆಗಳನ್ನು ಸಂಘಟನೆ ಮೂಲಕ ಸಮರ್ಥವಾಗಿ ಎದುರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟಿçÃಯ ಉಪಾಧ್ಯಕ್ಷ ನಿರ್ಮಲ್ ಸುರಾನಾ, ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನಿಲ್ ಹೆಗಡೆ, ವಾ.ಕ.ರ.ಸಾ.ಸ. ಅಧ್ಯಕ್ಷ ವಿ.ಎಸ್. ಪಾಟೀಲ್, ಕೆ.ಜಿ. ನಾಯ್ಕ, ಜಿಲ್ಲಾ ಪ್ರಭಾರಿ ಭಾರತಿ ಜಂಬಗಿ, ಯಲ್ಲಾಪುರ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಸೇರಿದಂತೆ, ಜಿಲ್ಲೆಯ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment