ಹೊನ್ನಾವರ; ನೂತನವಾಗಿ ಗ್ರಾಮ ಪಂಚಾಯತಿಗೆ ಸದಸ್ಯರಾಗಿ ಆಯ್ಕೆಯಾದ ವಿನಾಯಕ ನಾಯ್ಕ ಗ್ರಾ.ಪಂ. ಗೌರವಧನದಿಂದ ನೋಟಬುಕ್ ವಿತರಣೆಗೆ ಮುಂದಾಗಿದ್ದಾರೆ. ಹಿ. ಪ್ರಾ. ಅಡ್ಕರ ಶಾಲೆಯ76 ವಿದ್ಯಾರ್ಥಿಗಳಿಗೆ ಹಾಗೂ ಕಿ ಪ್ರಾಥಮಿಕ್ ಶಾಲೆ ಕೆ. ಮೂಡ್ಕಣಿಯ 26 ವಿದ್ಯಾರ್ಥಿಗಳಿಗೆ ಒಟ್ಟೂ 400ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು. ನೋಟ್ ಬುಕ್ ದಾನಿಗಳಾದ ವಿನಾಯಕ ನಾಯ್ಕ ಮಾತನಾಡಿ ಕಳೆದ 8 ವರ್ಷಗಳಿಂದ ನೋಟ್ ಬುಕ್ ವಿತರಿಸುತ್ತಾ ಬಂದಿದ್ದು ಈವರ್ಷದಿಂದ ಗ್ರಾಮ ಪಂಚಾಯತ್ ನೀಡುವ ಗೌರವ ಧನ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮದಲ್ಲಿದ್ದ ಬಡವರಿಗೆ ಸಂಧ್ಯಾ ಸುರಕ್ಷ, ಇಂಧೀರಾ ಗಾಂಧಿ ವೃದ್ದಾಪ್ಯ್ ವೇತನ, ವಿಧವಾ ವೇತನ ಸೌಲಭ್ಯ ಒದಗಿಸಲು ಮೀಸಲಿಟ್ಟಿದ್ದೇನೆ.
ಕೋವಿಡ್ ನಿಂದ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಪಡೆಯಲು ಪಾಲಕರ ಪಾತ್ರ ಅತಿ ಅವಶ್ಯ ಎಂದು ಹೇಳಿದರು ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜು ನಾಯ್ಕ ಮಾತನಾಡಿ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಪ್ರತಿ ವರ್ಷ ನೋಟ್ ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಾರ್ಯ ವೈಖರಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮ ಸದಸ್ಯರು ಪ್ರಕಾಶ್ ನಾಯ್ಕ, ರೇಖಾ ನಾಯ್ಕ ಮುಖ್ಯ ಶಿಕ್ಷಕರಾದ ಎಮ್ ಎಮ್ ನಾಯ್ಕ, ಗಿರಿಜಾ ನಾಯ್ಕ, ಜಯಾ ಶಾನಬಾಗ್ ಎಸ್ ಡಿ ಎಮ್ ಸಿ ಸದಸ್ಯರು ಪಾಲಕರು ಉಪಸ್ಥಿತರಿದ್ದರು.
Leave a Comment