ಹೊನ್ನಾವರ:ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಶ್ರೀ ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ ನೀಡಿದರು.
ಖರ್ವಾ ಗ್ರಾಮದ ಬರ್ನಕೇರಿ ಗ್ರಾಮದೇವತೆಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಕಲಾಕಾರ ಮಹೇಶ್ ಗೌಡ ಅವರು ಬಿಡಿಸಿದ ಆದಿಚುಂಚನಗಿರಿ ಜಗದ್ಗುರು ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರವನ್ನು ಶ್ರೀ ನಿಶ್ಚಲಾನಂದ ಸ್ವಾಮಿಗಳಿಗೆ ನೀಡಿದರು.
ಶ್ರೀಗಳು ಶರಾವತಿ ನದಿ ಮಾರ್ಗದ ಮೂಲಕ ಡಿಂಗಿಯಲ್ಲಿ ಮಾವಿನಕುರ್ವಾಕ್ಕೆ ತೆರಳಿ ಭಕ್ತರಾದ ನಾರಾಯಣ ಗೌಡ ಮತ್ತು ನಾಗರತ್ನ ದಂಪತಿಗಳ ಮನೆಗೆ ಭೇಟಿ ನೀಡಿದರು. ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಗ್ರಾಮದ ಸುತ್ತಮುತ್ತಲಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀಗಳ ಆಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾವಿನಕುರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಜಿ.ಜಿ ಶಂಕರ್,ಒಕ್ಕಲಿಗ ಯಕ್ಷಗಾನ ಬಳಗದ ಅಧ್ಯಕ್ಷ ರಾಮಗೌಡ, ಸಮಾಜದ ಮುಖಂಡರಾದ ಎಸ್.ಎಚ್ ಗೌಡ, ಸುಬ್ರಾಯ ಗೌಡ,ಭಾಸ್ಕರ್ ಪಟಗಾರ,ಮಂಜುನಾಥ ಗೌಡ,ಮಂಜು ಗೌಡ ಮತ್ತಿತರಿದ್ದರು.
shri devaki krishna, wash point ,karki naka honavar, contact; sachin mesta 9538529046,8310014860
Leave a Comment