ಶಿರಸಿ : 2021-22 ನೇ ಸಾಲಿನ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶಿರಸಿ ತಾಲೂಕಿನ ರೈತರಿಗೆ ಎಲ್ಲ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ ಹಾಗೂ ರಬ್ಬರ ಹೊರತುಪಡಿಸಿ) ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನ ಲಭ್ಯವಿದ್ದು.
ರೈತರು ಅನಮೋದಿತ ಹನಿ ನೀರಾವರಿ ಕಂಪನಿಯವರಿAದ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. ಗರಿಷ್ಠ 12-20-00 ಎಕರೆವರೆಗೆ (ತರಕಾರಿ ಮತ್ತು ಪುಷ್ಪ ಬೆಳೆಗಳಿಗೆ 5 ಎಕರೆಗೆ) ಸಹಾಯಧನ ಲಭ್ಯವಿದ್ದು.
ಸಣ್ಣ, ಅತಿ ಸಣ್ಣ ರೈತರಿಗೆ, ಪರಿಶಷ್ಟ ಜಾತಿ ಮತ್ತು ಪರಿಶಷ್ಟ ಪಂಗಡದ ರೈತರಿಗೆ 5 ಎಕರೆವರೆಗೆ ಶೇ.90 ರ ಸಹಾಯಧನ ಉಳಿಕೆ 7-20-00 ಎಕರೆವರೆಗೆ ಶೇ.45 ರ ಸಹಾಯಧನ ಹಾಗೂ ದೊಡ್ಡ ರೈತರಿಗೆ ಒಟ್ಟಾರೆ 12-20-00 ಎಕರೆವರೆಗೆ ಶೇ.45 ರ ಸಹಾಯಧನ ಲಭ್ಯವಿದ್ದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸಲು ಕೋರಲಾಗಿದೆ.
Leave a Comment