ಸೊರಬ : ವಿದ್ಯುತ್ ಶಾಕ್ ನಿಂದಾಗಿ ಸುಮಾರು 6 ವರ್ಷದ ಕಾಡುಕೋಣವೊಂದು ಅಸು ನೀಗಿದ ಘಟನೆ ತಾಲೂಕಿ ಅಬಸಿ ಅರಣ್ಯ ಸಮೀಪ ನಡೆದಿದೆ.
ಅಬಸಿ ಎಫ್ ಎಫ್ ಸಮೀಪದ ಸನಂ 2 ರ ನಂಜರು ಜಾಗವನ್ನು ಒತ್ತುವರಿ ಮಾಡಿಕೊಂಡು ಜೋಳ ಬೆಳೆಯುತ್ತಿದ್ದವರ ದುಷ್ಕೃತ್ಯವಿದು ಎನ್ನಲಾಗಿದ್ದು, ನೇರ ವಿದ್ಯತ್ ತಂತಿಯಿAದ ಬೆಳೆಯ ಸುತ್ತತಂತಿಯ ಮೂಲಕ ವಿದ್ಯತ್ ಹಾಯಿಸುತ್ತಿದ್ದುದರಿಂದ ಕೋಣ ವಿದ್ಯತ್ ಶಾಕ್ಗೆ ಬಲಿಯಾಗಿದೆ.
ಶುಕ್ರವಾರ ಈ ಘಡನೆ ನಡೆದಿದ್ದು ಕೋಣ ಬಲಿಯಾದ ಕೂಡಲೆ ಹೊಂಡ ಂತೆಗೆದು ಹುಗಿಯಲಾಗಿದೆ. ವಷಯ ತಿಳಿದ ಅರಣ್ಯ ಇಲಾಖೆ ಶನಿವಾರ ನ್ಯಾಯಾಲಯ ದ ಒಪ್ಪಿಗೆ ಪಡೆದು ಹುಗಿದಕೋಣವನ್ನು ಹೊರತೆಗೆದು ಶವ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಈ ದುಷ್ಕೃತ್ಯದ ಹಿನ್ನಲೆಯಲ್ಲಿ ಮೂವರು ಮೇಲೆ ದೂರು ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ಬಬ್ಬ ಆರೋಪಿ ಸಿಕ್ಕಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ಡಿಎಫ್ಒ ಎಸಿಎಫ್ ಮಾರ್ಗದರ್ಶನದಲ್ಲಿ ಡಿವೈಆರ್ಎಫ್ಒ ಶರಣಪ್ಪ ಮೋಹನ್, ಯೋಗರಾಜ್ ಸಿಬ್ಬಂದಿ ತನಿಖೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Leave a Comment