ಮನೆ ಕೆಲಸ ಮಾಡಲಿಲ್ಲವೆಂದು ಶಿಕ್ಷಕ ವಿದ್ಯಾರ್ಥಿಯನ್ನು ಹೊಡೆದು ಕೊಂದಿರುವ ಘಟನೆ ರಾಜಸ್ತಾನದ ಚುರು ಜಿಲ್ಲೆಯಲ್ಲಿ ನಡದಿದೆ.
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ೭ನೇ ತರಗತಿಯ ಗಣೇಶ್ (೧೩) ಕೊಲೆಯಾದ ವಿದ್ಯಾರ್ಥಿ. ಮನೀಜ್ ಕೊಲೆ ಮಾಡಿರುವ ಶಿಕ್ಷಕ. ತಮ್ಮ ಮನೆಗೆಲಸವನ್ನು ಪೂರ್ಣಗೊಳಿಸಲಿಸಿಲ್ಲವೆಂದು ಶಿಕ್ಷಕ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ ಮಾಡಿದ್ದು, ಪ್ರಜ್ಞಾಹೀನ ಸ್ಥತಿಯಲ್ಲಿದ್ದ ಬಾಲಕನನ್ನು ಆಸ್ಪತ್ರಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಶಿಕ್ಷಕನನ್ನು ವಶಕ್ಕೆ ಪಡೆದಿರುವುದಾಗಿ ಸಲಸಾರ್ ಪೊಲೀಸ್ ಠಾಣಾಧಿಕಾರಿ ಸಂದೀಪ್ ವಿಷ್ಣೋಯ್ ಹೇಳಿದ್ದಾರೆ. ಪ್ರಕರಣದ ತನಿಖೆ ಮುಗಿಯುವವರೆಗೂ ಶಾಲೆಯ ಮಾನ್ಯತೆ ಸ್ಥಗಿತಗೊಳಿಸುವಂತೆ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಸ್ರಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Leave a Comment