
ಯಲ್ಲಾಪುರ :ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದೆ.
ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈಎರಡು ಆನೆಗಳು ಸ್ಥಳೀಯ ಅರಣ್ಯ ದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ರವಿ ತಿಮ್ಮಣ್ಣ ಕುಣಬಿ ಮತ್ತ ಹರೀಶ್ಚಂದ್ರ ಕುಪ್ಪಣ್ಣ ಗೌಡರವರಿಗೆ ಹರೂರಿಂದ ಬರುವಾಗ ಕಾಣಿಸಿಕೊಂಡಿದೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಬ್ಬಣ್ಣ ಕುಂಟೇಗಾಳಿ ಮತ್ತು ಮಾಚಣ್ಣಾ ಬಾರೆಮಠ ಈ ಕುರಿತು ಯಲ್ಲಾಪುರದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.ಕಾಳಿ ನದಿಯಂಚಿನ ಅಣಶಿ ಅಭಯಾರಣ್ಯದಿಂದ ಈ ಆನೆಗಳು ಕದ್ರಾ ಜಲಾಶಯದಮೂಲಕ ಅರಣ್ಯ ಪ್ರದೇಶದಿಂದ ಯಲ್ಲಾಪುರ ಕಾರವಾರ ಗಡಿಯಂಚಿನ ಹರೂರ ಬಳಿ ಅರಣ್ಯಕ್ಕೆ ದಾರಿ ತಪ್ಪಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಒಂದೆರಡು ದಿನ ಕಾಡಿನಲ್ಲಿ ಇದ್ದು ಮತ್ತೆ ವಾಪಸ್ಸು ಅಣಶಿ ಅಭಯಾರಣ್ಯಕ್ಕೆ ಹಿಂದಿರುಗಬಹುದು. ಸ್ಥಳೀಯರು ಭಯಪಡುವ ಅಗತ್ಯವಿಲ್ಲಾ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಳು ತಿಳಿಸಿದ್ದಾರೆ.
Leave a Comment