ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು.
ಗ್ರಾಮ ಪಂಚಾಯತದ ಅಧ್ಯಕ್ಷೆ ವೀಣಾ ಗಾಂವ್ಕಾರ ರವರು ಕನ್ನಡ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಮಾತೃಭಾಷೆಯ ಬಗೆಗಿನ ಭಕ್ತಿ ಶಕ್ತಿಯಾಗಬೇಕು. ಆಡಳಿತ ಭಾಷೆಯನ್ನು ದಿನನಿತ್ಯದ ವ್ಯವಹಾರದಲ್ಲಿ ಕಡ್ಡಾಯವಾಗಿ ಬಳಸಿದರೆ ಕನ್ನಡ ಕಳೆದು ಹೋಗದು. ಅಪ್ಪಟ ದೇಸೀಯತೆಯನ್ನು ಜಗತ್ತಿಗೆ ಪರಿಚಯಿಸಲು ಕನ್ನಡ ಭಾಷೆ ಸಹಾಯಕವಾಗಿದೆ. ನಾಡು ನುಡಿಯ ಕುರಿತಾದ ಅಭಿಮಾನ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲದು. ಕನ್ನಡ ಸಾಹಿತ್ಯ ವನ್ನು ಹೆಚ್ಚೆಚ್ಚು ಓದುವ ಮೂಲಕ ಅಕ್ಷರ ಪ್ರೀತಿಯ ಸಾಂಗತ್ಯ ಉಳಿಸಬೇಕು ಮತ್ತು ಬೆಳಸಬೇಕಿದೆ. ಎಂದರು.
ಗ್ರಾಮ ಪಂಚಾಯತ ಸದಸ್ಯರಾದ ಲಲಿತಾ ಸಿದ್ದಿ, ಭಗೀರಥ ನಾಯ್ಕ, ಮುಖ್ಯಾಧ್ಯಾಪಕರಾದ ಎಮ್ ಕೆ ಭಟ್ಟ, ಇಂದಿರಾ ಕೋಮಾರ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು,ಸ್ರ್ತೀ ಶಕ್ತಿ ಸಂಘದ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕನ್ನಡವನ್ನು ಪ್ರತಿನಿಧಿಸುವ ಬಣ್ಣದ ವೇಷದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದ ಮಕ್ಕಳು ಕನ್ನಡಭಾಷೆಯ ಕುರಿತಾಗಿ ಘೋಷಣೆ ಕೂಗಿದರು.ಬಯಲಿನ ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಹಾಡಿದ ಕನ್ನಡದ ಗೀತ ಗಾಯನಕ್ಕೆ ಪುಟಾಣಿಮಕ್ಕಳು ಹೆಜ್ಜೆ ಹಾಕಿದರು. ಆರಂಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ ಕನ್ನಡ ಪ್ರತಿಜ್ಞಾ ವಿಧಿ ಬೋಧಿಸಿ ಸ್ವಾಗತಿಸಿದರು. ಪಂಚಾಯತ ಕಾರ್ಯದರ್ಶಿ ಜಿ.ಎಸ್. ಪತ್ರೇಕರ್ ವಂದಿಸಿದರು.
;
Leave a Comment