ಹೊನ್ನಾವರ; ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಕಾನೂನು ಸೇವಾ ಸಮಿತಿ ಹೊನ್ನಾವರ,ವಿವಿಧ ಇಲಾಖೆ,ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಕಾನೂನು ಅರಿವು ನೆರವು ಅಭಿಯಾನ’ ತಾಲೂಕಿನ ಖರ್ವಾ ಗ್ರಾ.ಪಂ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯಕಾರಿ ಸದಸ್ಯ ಕಾರ್ಯದರ್ಶಿಗಳಾದ ಸಂಪದಾ ಗುನಗಾ ಮಾತನಾಡಿ, ಅಪರಾಧ ನಡೆಸಿ ಕಾನೂನಿನ ಅರಿವಿಲ್ಲವೆಂದು ಶಿಕ್ಷೆಗಳಿಂದ ತಪ್ಪಿಸಿಕೊಳ್ಳುವ ಅವಕಾಶವಿಲ್ಲ.ಪ್ರತಿಯೊಬ್ಬರು ಕಾನೂನು ಅರಿವು ಹೊಂದುವುದು ಅವಶ್ಯಕ. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಗಳಿಗೆ ತೆರಳಿ ಜನರಿಗೆ ಸಾಮಾನ್ಯ ಕಾನೂನಿನ ಜ್ಞಾನ ನೀಡಲಾಗುತ್ತಿದೆ ಎಂದರು.
ಇಂದು ಸ್ಕ್ಯಾನಿಂಗ್ ತಂತ್ರಜ್ಞಾನ ದುರ್ಬಳಕೆಯಾಗಿ ಜನರ ಮೂಢನಂಬಿಕೆಗಳಿಂದ ಭ್ರೂಣಹತ್ಯೆಯಂತಹ ಕೃತ್ಯಗಳು ನಡೆಯುತ್ತಿದ್ದು ಇದು ಸಮಾಜಕಂಠಕವಾಗುತ್ತಿದೆ. ಇದನ್ನು ತಡೆಯಲು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಬಾಲಕಾರ್ಮಿಕರಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು ಬಾಲ ಕಾರ್ಮಿಕ ನಿಷೇಧಿಸಲಾಗಿದೆ ಎಂದರು. ಮಕ್ಕಳ ಮೇಲೆ ದೌರ್ಜನ್ಯ,ಅಪರಾಧಗಳು ನಡೆಯುತ್ತಿದೆ.ತಂದೆ-ತಾಯಿಗಳು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.ಇಲ್ಲವಾದಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತವೆ.
ಮೂಢನಂಬಿಕೆ, ಬಡತನ ಎಲ್ಲವು ಶೋಷಣೆಗೆ ಕಾರಣವಾಗುತ್ತದೆ. ಕಾಯ್ದೆಗಳು ಅವಶ್ಯಕತೆಯಿದ್ದು,ಅರಿವು ಕೂಡಾ ಅಗತ್ಯವಾಗಿದೆ.ಜನರಿಗೆ ಕಾನೂನು ನೆರವು ಬೇಕಾದಲ್ಲಿ ತಾಲೂಕಾ ಮಟ್ಟದಲ್ಲಿರುವ ಕಾನೂನು ಪ್ರಾಧಿಕಾರದ ಸಮಿತಿ ಸಂಪರ್ಕಿಸಬಹುದು ಎಂದರು.ವ್ಯಾಜ್ಯಗಳಿದ್ದಲ್ಲಿ ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನ್ಯಾಯವಾದಿ ಶ್ಯಾಮಲಾ ನಾಯ್ಕ ಮಾತನಾಡಿ, ನಾವು ಕಾನೂನು ಚೌಕಟ್ಟಿನಲ್ಲಿ ಜೀವಿಸುತ್ತಿರುವುದರಿಂದ ಕಾನೂನು ಅರಿವು ಹೊಂದುವುದು ಅವಶ್ಯಕ. ನ್ಯಾಯಾಲಯಕ್ಕೆ ತೆರಳಿ ಕಾನೂನು ಜ್ಞಾನ ಪಡೆಯಬೇಕಿಂದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಕಾನೂನು ಅರಿವು ಪಡೆಯಬಹುದು ಎಂದರು. ಮೊಟಾರು ವಾಹನ ಖಾಯ್ದೆಗಳ ಬಗ್ಗೆ ತಿಳಿಸಿದರು.ಅಗತ್ಯ ವಾಹನ ದಾಖಲೆಗಳನ್ನು ಹೊಂದಿರುವ ಜೊತೆಗೆ ರಸ್ತೆ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಖರ್ವಾ ಗ್ರಾ.ಪಂ ಅಧ್ಯಕ್ಷೆ ಭವಾನಿ ಗೌಡ,ಉಪಾಧ್ಯಕ್ಷ ಶ್ರೀಧರ್ ನಾಯ್ಕ, ಗ್ರಾ.ಪಂ ಕಾರ್ಯದರ್ಶಿ ಎನ್.ಎಚ್ ಅಂಬಿಗ ಉಪಸ್ಥಿತರಿದ್ದರು.ಜಿ.ಕೆ ಗೌಡ ಕಾರ್ಯಕ್ರಮ ನಿರ್ವಹಿಸಿದರು.
shri devaki krishna wash point karki naka honavar contact; sachin mesta 9538529046,8310014860
Leave a Comment