ಶಿವಮೊಗ್ಗ : ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರಮುಖ ಆರ್ಥಿಕ ಜೀವನಾಡಿ ಬೆಳೆಯಾಗಿರುವ ಅಡಿಕೆ ಕ್ಯಾನ್ಸರ್ಕಾರಕ ಎಂಬ ಅಂಶವನ್ನು ಅಮೆರಿಕಾದ ಮೊಲೆಕ್ಯುಲರ್ ಸೆಲ್ ಹೆಸರಿನ ಜನರಲ್ನಲ್ಲಿ ಕೈಬಿಡಲಾಗಿದೆ.
ಇದರಿಂದ ಅಡಿಕೆ ಕ್ಯಾನ್ಸರ್ಕಾರಕವಲ್ಲ ಹಾಗೂ ಆರೊಗ್ಯಕ್ಕೆ ಹಾನಿಕರಕವಲ್ಲ ಎಂಬ ಅಡಿಕೆ ಬೆಳೆಗಾರರ ವಾದಕ್ಕೆ ಮತ್ತಷ್ಟು ಪುಷ್ಠ ಸಿಕ್ಕಂತಾಗಿದೆ. ಅಡಿಕೆ ಕ್ಯಾನ್ಸರ್ಕಾರಕ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ಗೆ ಅಫಿಡೆಪಿಟ್ ಸಲಿಸಿತ್ತು. ಈ ಬಗ್ಗೆ ಅಡಿಕೆ ಬೆಳೆಗಾರರು ಹಾಗೂ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರದ ನಿರ್ಧಾರ ಖಂಡಿಸಿದ್ದರು.
ಆದರೆ ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅಪಿಡೆಮಿಟ್ನ್ನು ಸಲ್ಲಿಸಿಲ್ಲ ಎಂಬ ಹೇಳಿಕೆ ಬಿಜೆಪಿಯ ಅನೇಕ ನಾಯಕರು ನೀಡಿದ್ದರು. ಅಫಿಡೆವಿಟ್ಗೆ ಸಂಬAಧಿಸಿದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸದ ಗೆರೆಯನ್ನು ಮೂಡಿಸಿದೆ.
Leave a Comment