ಅಂದರ್ ಬಾಹರ್ ಜೂಜಾಟ; ಇರ್ವರ ಬಂಧನ

ಹೊನ್ನಾವರ; ತಾಲೂಕಿನ ಹಳದೀಪುರ ಕನ್ನಡ ಶಾಲೆಯ ಸಮೀಪ ಸಾರ್ವಜನಿಕ ಲಾಭಕ್ಕಾಗಿ ಇಸ್ಪೀಟ್ ಎಲೆಗಳ‌ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಹೊನ್ನಾವರ ಪೋಲಿಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇರ್ವರನ್ನು ಬಂಧಿಸಿದ್ದು, ಐವರು ಪರಾರಿಯಾಗಿದ್ದಾರೆ.೩೮೬೦ ನಗದು ಹಾಗೂ ಇಸ್ಟೀಟ್ ಎಲೆ ಹಾಗೂ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ಪರಾರಿಯಾದವರ ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.