ಗುಬ್ಬಿ : ಪೊಲೀಸರ ದಾಳಿ ವೇಳೆ ಕಳ್ಳರು ಎದ್ದೆನೋ, ಬಿದ್ದೆನೋ ಎಂದು ಓಡಿ ಹೋಗುವುದು ಸಹಜ. ಆದರೆ ಪಿಎಸ್ಐ ಒಬ್ಬ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಕಾಲ್ಕತ್ತಿರುವ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಸಿ.ಎಸ್. ಪುರ ಪಿಎಸ್ಐ ಸೋಮಶೇಖರ್ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯ ನಾಚಿಸುವಂತಾಗಿದೆ. ಸಿ.ಎಸ್.ಪುರ ಠಾಣೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ಕೂಡ ಎಸಿಬಿ ದಾಳಿಗೆ ಒಳಗಾಗಿದ್ದರು.
ಪ್ರಕರಣದ ವಿವರ : ಕಳೆದ 22 ರಂದು ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಕ್ವಿಡ್ ಕಾರು ವಶಕ್ಕೆ ಪಡೆದುಕೊಂಡಿದ್ದರು. ಚಂದ್ರಣ್ಣ ಕೋರ್ಟ್ನಲ್ಲಿ ಜಾಮೀನು ಪಡೆದು ಕಾರು ಬಿಡುಗಡೆಗೆ ಪಿಎಸ್ಐ ಸೋಮಶೇಖರ್ ಬಳಿ ಬಂದಾಗ ಸೋಮಶೇಖರ್ ಮುಖ್ಯಪೇದೆ ನಯಾಜ್ ಅಹಮದ್ ಮೂಲಕ 28 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿದ್ದರು.
ಅಲ್ಲದೇ ಈ ಸಂಬAಧ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಬುಧವಾರ ಬಾಕಿ ಹಣ 16 ಸಾವಿರ ರೂ. ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪಿಡಸ್ಐ ಸೋಮಶೇಖರ್ ಹಾಗೂ ಮಖ್ಯ ಪೇದೆ ನಯಾಜ್ ಅಹಮದ್ನನ್ನು ವಶಕ್ಕೆ ಪಡೆದುಕೊಂಡಿದ್ದರು.
Leave a Comment