ಯಲ್ಲಾಪುರ : ತಾಲೂಕಿನ ಮಾವಳ್ಳಿ ಶ್ರೀ ಕನ್ನಡಗಲ್ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡದ ಕಳಸಾರೋಹಣ ಹಾಗೂ ಪರಿವಾರ ದೇವರುಗಳಾದ ಈಶ್ವರ ಹಾಗೂ ನಾಗದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ನ.6 ರಿಂದ 9 ರವರೆಗೆ ನಡೆಯಲಿದೆ
ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಪಾದಯ್ಯ
ನಂದೊಳ್ಳಿಮಠ ತಿಳಿಸಿದ್ದಾರೆ.
ಸೋಂದಾ ಸ್ವರ್ಣವಲ್ಲಿ ಪೂಜ್ಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ದಿವ್ಯಾನುಗ್ರಹದಿಂದ ನ. 08ರಂದು ದೇವಸ್ಥಾನದ ನೂತನ ಕಟ್ಟಡದ ಕಳಶಾರೋಹಣ ಹಾಗೂ ಈಶರ, ಬಸವೇಶರ ಹಾಗೂ ನಾಗದೇವರಪ್ರತಿಷ್ಟೇ ಹಾಗೂ “ಅನ್ನ ಪ್ರಸಾದ ನಡೆಯಲಿದೆ. ನ.9 ರಂದು ಶ್ರೀ ಅಮ್ಮನವರಲ್ಲಿ ನವಚಂಡಿ ಹವನ, ತೀರ್ಥ ಪ್ರಸಾದ ವಿತರಣೆ, ಆಶೀರ್ವಚನ ಹಾಗೂ “ಅನ್ನ ಪ್ರಸಾದ” ನಡೆಯಲಿದೆ. ಸಮಸ್ತ ಭಕ್ತ ಜನರು
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.
Leave a Comment