ಮಂಗಳೂರು : ನಗರದ ಕಂಕನಾಡಿ ಬಳಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅನಾಥ ಸ್ಥಿತಿಯಲ್ಲಿ ಕಂಡುಬAದ ಮೃತದೇಹದ ಗುರತು ಪತ್ತೆಯಾಗಿದೆ.
ಮೃತರನ್ನು ಮಣ್ಣಗುಡ್ಡೆಯ ಪ್ರಶಾಂತ್ ಕೊಟ್ಟಾರಿ (44) ಎಂದು ಗುರುತಿಸಲಾಗಿದೆ. ಮಣ್ಣಗುಡ್ಡೆ ನಿವಾಸಿಯಾದ ಇವರು ಆಸ್ಪತ್ರೆಗೆ ಹೋಗಿ ಬರುವುದು ಪತ್ನಿಯ ಬಳಿ ಗುರುವಾರ ಬೆಳಗ್ಗೆ 10:30ಕ್ಕೆ ತಿಳಿಸಿ ಹೋಗೊದ್ದು, ಸಂಜೆಯಾದರೂ ಮರಳಿ ಬಾರದ ಕಾರಣ ಬರ್ಕೆ ಠಾಣೆಗೆ ದೂರು ನೀಡಲಾಗಿತ್ತು. ಗುರುವಾರ ರಾತ್ರಿ ಯಿಂದಲೇ ಕಾರೊಂದು ಕಂಕನಾಡಿಯಲ್ಲಿ ಪಾರ್ಕ್ ಮಾಡಿದ ಸ್ಥತಿಯಲ್ಲಿ ನಿಂತಿತ್ತು ಎನ್ನಲಾಗಿದೆ.
ಇಂದು ಮಧ್ಯಾಹ್ನವೂ ಈ ಕಾರು ಅನಾಥ ಸ್ಥತಿಯಲ್ಲಿರುವುದನ್ನು ಕಂಡ ಸಾರ್ವಜನಿಕರು ಪರಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಕಂಡುಬAದಿದೆ. ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಶೀಲನೆ ನಡೆಸಿ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.
Leave a Comment