ಯಲ್ಲಾಪುರ: ತಾಲೂಕಿನ ಮಂಚೀಕೇರಿಯರಂಗ ಸಮೂಹ ಇವರ ಆಶ್ರಯದಲ್ಲಿ ರಂಗ ಪ್ರದರ್ಶನ ‘ಕಾಲ ಚಕ್ರ’ ನಾಟಕ ಪ್ರದರ್ಶನ ನ. 17 ರಿಂದ 20 ರ ವರೆಗೆ ನಡೆಯಲಿದೆ. ಮಂಚಿಕೇರಿ ಸಮೀಪದ ಜೋಗಭಟ್ರಕೇರಿಯ ‘’ ಜಿ. ಎನ್. ಶಾಸ್ತ್ರಿ ಯವರ ನಂದನಂ ಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದೆ.
ನಾಟಕದ ರಚನೆಯ ಮೂಲ ಮರಾಠಿಯ ಜೈವಂತ ದಳ್ವಿಯವರಾಗಿದ್ದು, ಕನ್ನಡಕ್ಕೆ ಎಚ್. ಕೆ. ಕರ್ಕೆರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಲಿದ್ದು, ಸಹ ನಿರ್ದೇಶನ ಸಾಲಿಯಾನ್ ಉಮೇಶ ನಾರಾಯಣ ಅವರದ್ದಾಗಿದೆ.
ಮಂಚಿಕೇರಿ ಪ್ರದೇಶದಲ್ಲಿ ಸಾಂಸ್ಕೃತಿಕ ಪೂರಕ ವಾತಾವರಣ ಇದೆ. ಮಂಚಿಕೇರಿ ರಂಗ ಸಮೂಹ ಕಾರ್ಯಚಟುವಟಿಕೆಗಳಿಗೆ ಅಲ್ಲಿನ ನಾನಾ ಸಂಘ ಟನೆಗಳ ಸಹಯೋಗವಿದೆ. ಈಗ ಪ್ರಸ್ತುತಪಡಿಸುತ್ತಿರುವ ಈ ನಾಟಕದ ಪಾತ್ರಧಾರಿಗಳು ಹೆಚ್ಚಾಗಿ ಕೃಷಿ ಮೂಲದಿಂದ ಬಂದವರು. , ಗೃಹಿಣಿಯರು, ವಿದ್ಯಾರ್ಥಿಗಳು, ಶಿಕ್ಷಕರು. ಹೀಗೆ ವಿವಿಧ ಹಿನ್ನೆಲೆ ಉಳ್ಳವರು ಇದ್ದಾರೆ.
ನಾಟಕದ ಪಾತ್ರಧಾರಿಗಳಾಗಿ ರಂಗ ನಿರ್ದೇಶಕ ಎಮ್ ಕೆ ಭಟ್ಟ ಯಡಳ್ಳಿ, ಆರ್ ಎನ್ ಭಟ್ಟ ದುಂಡಿ, ಯಕ್ಷಗಾನ ಕಲಾವಿದೆ ನಿರ್ಮಲಾ ಗೋಳಿಕೊಪ್ಪ, ಶಿಕ್ಷಕ ಪ್ರಕಾಶ ಭಟ್ಟ ಸೇರಿದಂತೆ ಇನ್ನಿತರ ಕಲಾವಿದರು ನಟಿಸಿದ್ದಾರೆ .
ಈ ರಂಗ ಪ್ರಯೋಗದ ವಿಶೇಷತೆಯೆಂದರೆ ಅದು ರಂಗ ವೇದಿಕೆಯಲ್ಲಿ ನಡೆಯುತ್ತಿಲ್ಲ. ಹಳ್ಳಿಯ ಹಳೆಯ ಮನೆ ಮಾಳಿಗೆ ಮೇಲೆ ನಾಟಕದ ಮೊದಲನೆ ಅಂಕ ಮತ್ತು ಜಗುಲಿ ಮೇಲೆ ಎರಡನೆ ಅಂಕ ಪ್ರದರ್ಶನ ಏರ್ಪಾಟಾಗಿದೆ.
ಕಾಲಚಕ್ರ ನಾಟಕದಲ್ಲಿ ಎರಡು ಮನೆಗಳಲ್ಲಿ ನಡೆಯುವ ತಳಮಳದ ಚಿತ್ರಣವಿದೆ. ರಂಗವೇದಿಕೆಯ ಬದಲು ಮನೆಯ ಜಗುಲಿ ಮತ್ತು ಮಾಳಿಗೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಂಚಿಕೇರಿ ರಾಜರಾಜೇಶ್ವರಿ ರಂಗಸಮೂಹ, ಮುಖ್ಯಸ್ಥರಾದ ಆರ್.ಎನ್. ಭಟ್ಟ ದುಂಡಿ,ತಿಳಿಸಿದ್ದಾರೆ
Leave a Comment