ಕುಮಟಾ : ತಾಲೂಕಿನ ಧಾರೇಶ್ವರ ನಾಗತೀರ್ಥದ ಮಹಿಳೆಯ ಮೇಲೆ ಕರ್ಕಿಯ ಇಬ್ಬರು ಯುವಕರುಹಲ್ಲೆಗೆ ಮುಂದಾಗಿರುವುದಲ್ಲದೇ ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯ ನಿವಾಸಿ ಸದೀಪ ಮುಕ್ರಿ ಹಾಗೂ ಸುನೀಲ ಮುಕ್ರಿ ವಿರುದ್ಧ ದೂರು ದಾಖಲಾಗಿದೆ. ಇವರಿಬ್ಬರು ಕ್ಷÄಲ್ಲಕ ಕಾರಣಕ್ಕೆ ಧಾರೇಶ್ವರ ನಾಗತೀಥದ ಇಂದಿರಾ ಮುಕ್ರಿ ಅವರ ಮನೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಆಕೆಯ ಪತಿಯ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಕ್ಕೆ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ ಪತಿ-ಪತ್ನಿಗೊಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕುಮಟಾ ಠಾಣೆ ಪೊಲೀಸರು ಆರೋಪಿತರನ್ನು ಬಂಧಿಸಲು ತನಿಖೆ ಕೃಗೊಂಡಿದ್ದಾರೆ.
Leave a Comment