ಹೊನ್ನಾವರ : ಪಟ್ಟಣದ ಎಸ್ಡಿಎಂ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿ ಮುಗ್ವಾ ಹಳಗೇರಿ ಮೂಲದ, ಅನಂತವಾಡಿ ಕೋಟಾದಲ್ಲಿ ವಾಸವಾಗಿದ್ದ ವಿಶಾಲ ಗೌಡ (17) ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಡನೆ ಮಂಗಳವಾರ ಸಂಜೆ ನಡೆದಿದೆ.
ವಿಶಾಲ್ ಪ್ರಥಮ ಪಿಯುಸಿಗೆ ಸೇರಿದ ನಂತರವಷ್ಟೇ ಕೋಟಾದಿಂದ ಕಾಲೇಜಿಗೆ ಬರುತ್ತಿದ್ದ ಎನ್ನಲಾಗಿದೆ. ಕೃಷಿಕರಾಗಿರುವ ತಂದೆ ತಾಯಿಯ ಕಿರಿಯ ಮನನಾಗಿದ್ದ ಈತನನ್ನು ಚೆನ್ನಾಗಿ ಓದಿಸುವ ಹಂಬಲ ಇಟ್ಟುಕೊಂಡಿದ್ದೂರು ಯಾರಿಗೂ ಹೇಳದೇ ಕೇಳದೇ ಆತ್ಮಹತ್ಯೆಯಂತದುಡುಕಿನ ನಿರ್ಧಾರಕ್ಕೆ ಮುಂದಾಗಿರುವುದು ಹೆತ್ತವರನ್ನು ಅಘಾತಕ್ಕೀಡು ಮಾಡಿದೆ.
ಬೀಕರ ದೃಶ್ಯ : ರೈಲಿನ ಗಾಲಿಗೆ ಸಿಕ್ಕು ದೇಹ ಭಿದ್ರವಾಗಿದ್ದು, ರುಂಡು ಒಂದು ಕಡೆ ಮುಂಡ ಒಂದು ಕಡೆ ಬಿದ್ದಿದೆ. ಸ್ಥಳಕ್ಕೆ ಮಂಕಿ ಪೊಲೀಸರು ದೌಡಾಯಿಸಿ ಸಾರ್ವಜನಿಕರ ಸಹಕಾರದಿಂದ ಶವವನ್ನು ಸ್ಥಳಾಂತರಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Leave a Comment