ಹೊನ್ನಾವರ : ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ಗೋಡೆ ಕೆಲಸ ಮಾಡುತ್ತಿದ್ದಾಗ ಗೋಡೆಯಿಂದ ಕೆಳಗೆ ಬಿದ್ದು ಹಳದಿಪುರ, ಬಗ್ರಾಣಿಯ ರಾಮ ಗೌಡ ಮೃತ ಪಟ್ಟಿದ್ದಾರೆ.
ಗುತ್ತಿಗೆದಾರ ರತ್ನಾಕರ ನಾಯ್ಕರವರ ಬೇಜಬ್ದಾರಿ ವರ್ತನೆಯೇ ಪತಿಗೆ ಸಾವಿಗೆ ಕಾರಣ ಎಂದು ಮೃತರ ಪತ್ನಿ ಸಾವಿತ್ರಿ ಗೌಡ ದೂರು ನೀಡಿದ್ದಾರೆ. ನನ್ನ ಗಂಡನನ್ನು ಒತ್ತಾಯಪೂರ್ವಕವಾಗಿ ಲಕಡಿ ಗಣೇಶರವರ ಜಾಗದಲ್ಲಿ ಕಪೌಂಡ್ ನಿರ್ಮಾಣದ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಕರೆದಿಯ್ದು, ಅವರು ಮೃತಪಡಲು ಕಾರಣರಾಗಿದ್ದಾರೆ.
ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Leave a Comment