ಶಿರಸಿ : ಗಾಂಜಾ ಸಾಗಾಟಾ ಮಾಡುತ್ತಿದ್ದ ಈರ್ವರು ಗ್ರಾಮೀಣ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿ ಘಟನೆ ತಾಲೂಕಿನ ಮರದಲ್ಲಿ ಮಾರುತಿ ದೇವಸ್ಥಾನದ ಬಳಿ ನಡೆದಿದೆ. ಅಭಿಷೇಕ ಹೆಗಡೆ ಹಾಗೂ ಮಂಜುನಾಥ ಮಾನೆ ಬಂಧಿತರು.
ಇವರು ದಾಸನಕೊಪ್ಪದಿಂದ ಉಸುರಿ ಮಾರ್ಗವಾಗಿ ಶಿರಸಿಗೆ ಗಾಂಜಾ ತರುತ್ತಿರುವಾಗ ಗ್ರಾಮೀಣ ಠಾಣೆ ಪೊಲಿಸರು ದಾಳಿ ಮಾಡಿ ಆರೋಪಿತರನ್ನು ಹಾಗೂ ಆರೋಪಿಗಳಿಂದ 4000 ರೂ. ಮೌಲ್ಯದ 136 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಸಿ ರವಿ ನಾಯ್ಕ ಸಿಪಿಐ ರಾಮಚಂದ್ರ ನಾಯಕ. ಗ್ರಾಮೀಣ ಠಾಣೆ ಪಿಎಸ್ಐ ಈರಯ್ಯ ಹಾಗೂ ಸಿಬ್ಬಂದಿ ಚೇತನ್ ಕುಮಾರ್ ಹಲಗೇರಿ ಸುರೇಶ್ ಪಟ್ಟಿ, ಗಣಪತಿ ನಾಯ್ಕ ಜಿಮ್ಮು ಶಿಂಧೆ ಚೇತನ್, ಸಂಗಪ್ಪ ಹಾಗೂ ಸುನೀಲ್ ಹಡಲಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Comment