ಯಲ್ಲಾಪುರ: ಪಟ್ಟಣದ ಪೊಲೀಸ್ ಸ್ಟೇಷನ್ ನಲ್ಲಿ ಅಧಿಕಾರಿ ಮತ್ತ ಸಿಬ್ಬಂದಿಗಳಿಗೆ ಯೋಗಾಭ್ಯಾಸದ ಕುರಿತು ಕಾರ್ಯಾಗಾರ ನಡೆಯಿತು.ಅಂತರಾಷ್ಟ್ರೀಯ ಯೋಗ ಶಿಕ್ಷಕ ಹಾಗೂ ಬ್ರೇನ್ ಯೋಗಿ ಎಂದೇ ಹೆಸರುವಾಸಿಯಾಗಿರುವ ಶ್ರೀನಿವಾಸ್ ಗುರೂಜಿ ಅವರು ಒತ್ತಡವನ್ನು ನಿಯಂತ್ರಿಸುವ ಬಗ್ಗೆ ಸುಲಭ ಯೋಗಾಸನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಸವಿಸ್ತಾರವಾಗಿ ತಿಳಿಸಿದರು.
ಸಿ.ಪಿ.ಐ. ಸುರೇಶ ಯಳ್ಳೂರ್ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಪಿ.ಎಸ್.ಐ. ಪ್ರಿಯಾಂಕಾ ನ್ಯಾಮಗೌಡ ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು, ಯಲ್ಲಾಪುರದ ಸಿವಿಲ್ ಗುತ್ತಿಗೆದಾರರಾದ ಮಂಜು ಮುದ್ದಪ್ಪ ಅಂಗಡಿ ಹಾಗೂ ಪಿಡಬ್ಲೂಡಿ ಇಂಜಿನಿಯರ್ ಹನುಮಂತ ರಾಯಪ್ಪ ಸಹ ಭಾಗವಹಿಸಿದ್ದರು.
Leave a Comment