
ಯಲ್ಲಾಪುರ:ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಗುರಿಯನ್ನು ಬರೆದಿಟ್ಟುಕೊಂಡು ಪ್ರತಿನಿತ್ಯ ಆ ಗುರಿಯನ್ನು ತಲುಪಲು ಕಾರ್ಯ ಪ್ರವೃತ್ತರಾಗಬೇಕು. ದೇಹ ಮತ್ತು ಮನಸ್ಸಿನ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮೋಟಿವೇಶನಲ್ ಆ್ಯಂಡ್ ಸ್ಕಿಲ್ ಟ್ರೇನರ್, ಯೋಗಿ ಟಾರ್ಸ್ ಪಾಯಿಂಟ್ನ ತರಬೇತುದಾರ ಯೋಗೇಶ ಶಾನಭಾಗ ಮಾತನಾಡಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ರಾಷ್ಟಿçÃಯ ಸೇವಾ ಯೋಜನೆ ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವರೆಡ್ ಕ್ರಾಸ್ ಸಹಯೋಗದಲ್ಲಿ ೧೫೯ ನೇಯ ‘ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟಿçÃಯ ಯುವ ಸಪ್ತಾಹ-೨೦೨೨’ . ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ವಿದ್ಯಾರ್ಥಿಗಳಾದ ಆಶಾ ಬೆಳ್ಳೆನವರ , ಪೃಥ್ವಿ ಗಾಂವ್ಕರ್ , ರಾಹುಲ್ , ದೀಪಕ ಭಟ್ ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ|| ದಾಕ್ಷಾಯಣಿ ಜಿ ಹೆಗಡೆರ ಮಾತನಾಡಿ ಆಧ್ಯಾತ್ಮಿಕ ಚಿಂತಕ ಮತ್ತು ಅದಮ್ಯ ಉತ್ಸಾಹದ ಚಿಲುಮೆಯಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಂಡು ಆ ಮೂಲಕ ಜೀವನದಲ್ಲಿ ಉನ್ನತವಾದ ಧ್ಯೇಯೋದ್ದೇಶಗಳೊಂದಿಗೆ ಮುನ್ನಡೆಯಬೇಕೆಂದರು.
ಭುವನೇಶ್ವರಿ ಗೌಡ ಪ್ರಾರ್ಥಿಸಿದರು. ಐಕ್ಯೂಎಸಿ ಸಂಚಾಲಕರಾದ ಡಿ ಎಸ್ ಭಟ್ ಸ್ವಾಗತಿಸಿದರು. ರಾಷ್ಟಿçÃಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ರಾಮಕೃಷ್ಣಗೌಡ ಪ್ರಾಸ್ತಾವಿಕ ಮಾತನಾಡಿದರು. ರೋರ್ಸ್ ಸ್ಕೌಟ್ಸ್ ಲೀಡರ್ ಡಿ ಜಿ ತಾಪಸ್ರವರು ವಿವೇಕ ಜ್ಯೋತಿ-ವಿವೇಕ ವಾಣಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಹಿತ್ಯ ವೇದಿಕೆಯ ಸಂಚಾಲಕಿ ಸವಿತಾ ನಾಯ್ಕ ವಂದಿಸಿದರು. ಪ್ಲೇಸ್ಮೆಂಟ್ ಸೆಲ್ನ ಸಂಚಾಲಕಿ ಸುರೇಖಾ ತಡವಲ ನಿರೂಪಿಸಿದರು.
Leave a Comment