ಕಾರವಾರ : ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಸದ್ಯ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿದ್ದರಿಂದ ಹಾಗೂ ಐದಕ್ಕಿಂತ ಹೆಚ್ಚು ಸೋಂಕು ಪತ್ತೆಯಾಗುವ ಶಾಲೆಗಳಲ್ಲಿ ಮಾತ್ರ ಒಂದು ವಾರಗಳ ಕಾಲ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ತಿಳಿಸಿದ್ದಾರೆ.
ಸರ್ಕಾರ ಆದೇಶ ಮಾಡಿದ ಹಿನ್ನಲೆಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕಾರವಾರ ನಗರದ ಬಾಲಮಂದಿರ ಹಾಗೂ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಒಂದು ವಾರಗಳ ಕಾಲ ಬಂದ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ನೋಡೆಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರತಿನಿತ್ಯ ಎಷ್ಟು ಪಾಸಿಟಿವ ಪ್ರಕರಣ ದಾಖಲಾಗಿದೆ. ಎಷ್ಟು ಸ್ಯಾಂಪಲ್ ಸಂಗ್ರಹಿಸಲಾಗಿದೆ ಎಂದು ನೋಡೆಲ್ ಅಧಿಕಾರಿಗಳು ವರದಿ ನೀಡಲಿದ್ದು ವರದಿಯನ್ವಯ ಕ್ಲಸ್ಟರ್ ಪ್ರಕಾರ ಬಂದ್ ಮಾಡವ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 6 ವರ್ಷದೊಳಗಿನ 6 ಮಕ್ಕಳು, 7 ರಿಂದ 12 ವರ್ಷದೊಳಗಿನ 5 ಮಕ್ಕಳು ಮತ್ತು 13 ರಿಂದ 18 ವರ್ಷದೊಳಗಿನ 41 ಮಕ್ಕಳಿಗೆ ಇದುವರೆಗೆ ಕೋವಿಡ್ ಸೋಂಕು ತಗುಲಿದೆ. ಶಾಲೆ, ಕಾಲೇಜ್ ಹೊರಗೂ ಮಕ್ಕಳು ಮಾಸ್ಕ್ ಧರಿಸುವ ನಿಯಮಾವಳಿ ಪಲಿಸುವಂತೆ ನೋಡೊಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಶಾಲಾ ಕಾಲೇಜಿನ ಶಿಕ್ಷಕರು ಉಪನ್ಯಾಸಕರು ಜೊತೆಗೆ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಅನವಶ್ಯಕವಾಗಿ ದೂರದ ಊರುಗಳಿಗೆ ಪ್ರಯಾಣ ಸದ್ಯದ ಮಟ್ಟಿಗೆ ಮಾಡಬಾರದು. ಒಂದೊಮ್ಮೆ ಹೋಗುವುದಾದರೆ ಆಯಾ ಶಾಲಾಕಾಲೇಜಿನ ಮುಖ್ಯಸ್ಥರ ಅನುಮತಿ ಪಡೆದು ಹೋಗಬೇಕು. ವಾಪಾಸ್ ಬಂದ ನಂತರ ಕ್ವಾರಂಟೈನ್ ಆಗಿ ಸೋಂಕಿನ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡಿಕೊಂಡು ಮುಂಜಾಗೃತೆ ವಹಿಸಬೇಕು ಎಂದರೆ.
ಫ್ರಾಥಮಿಕ ಹಾಗೂ ಫೌಢ ಹಂತಕ್ಕೆ ಶಿರಸಿ ಹಾಗೂ ಕಾರವಾರ ಡಿಡಿಪಿಐಹಳು ಪಿಯು ತರಗತಿಗಳಿಗೆ ಡಿಡಿಪಿಯು, ಎಲ್ಲ ಸರ್ಕಾರಿ ಕಾಲೇಜ್ಗಳಿಗೆ ಕಾರವಾರ ಸರ್ಕಾರಿ ಪದವಿ ಕಾಲೇಜ್ ಪ್ರಾಂಶುಪಾಲರನ್ನು ಹಾಗೂ ಖಾಸಗಿ ಸಂಸ್ಥೆಗಳಿಗೆ ದಿವೇಕರ್ ಕಾಲೇಜ್ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳು ಎಂದು ನೇಮಿಸಲಾಗಿದೆ.
ಅಂಗನವಾಡಿಯಲ್ಲಿ ಕಾರ್ಯಕರ್ತರಿಗೆ ಶಿಕ್ಷಕರಿಗೆ ಯಾರಿಗೆ ಪಾಸಿಟಿವ್ ಬಂದರು ಆಯಾ ಅಂಗನವಾಡಿ ಬಂದ್ ಮಾಡಲಾಉವುದು. ಮಕ್ಕಳಲ್ಲಿ ಪಾಸಿಟಿವ್ ಬಂದರು ಬಂದ್ ಮಾಡಲಾಗುವುದು. ಅಂಗನವಾಡಿಯಲ್ಲಿ ಕೆಲಸ ಮಾಡುವವರಿಗೆ ಹದಿನೈದು ದಿನಕ್ಕೊಮ್ಮೆ ಸ್ಯಾಂಪಲ್ ಸಂಗ್ರಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
Leave a Comment