ಸಾಗರ ರಸ್ತೆಯ ಕಲ್ಲಾಬೇ ಕ್ರಾಸ್ನಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ರಮೇಶ ಬಾದಿ ಎನ್ನುವ ವ್ಯಕ್ತಿ ತನ್ನ ತಾಯಿಯಾದ ಸರೋಜ ಬಾದಿಯನ್ನು ಕುಂಟವಾಣಿಯಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆಎದುರಿನಿಂದ ವೇಗವಾಗಿ ಬಂದ ಮೋಟಾರ್ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದ್ದು ಮೂವರು ಗಂಭೀರವಾಗಿ ಗಾಯಗೊಂದಿದ್ದರು, ಮೋಟಾರ್ ಬೈಕ ಪ್ರದೀಪ್ ರಾಮಯ್ಯ ಗೊಂಡನಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಇನ್ನಿಬ್ಬರಾದ ಎಕ್ಟಿವಾ ಬೈಕ್ ನಲ್ಲಿದ್ದ ತಾಯಿ ಸರುಜಾ ಕೃಷ್ಣ ಬಂಡೆ (55) ಮತ್ತು ಮಗ ರಮೇಶ ಮಾದೇವ ಬಂಡೆ (20) ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
Leave a Comment