
ಯಲ್ಲಾಪುರ: ಬೀದರ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಕರ್ತವ್ಯನಿರತ ತಹಶೀಲ್ದಾರರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಯಲ್ಲಾಪುರ ಸರಕಾರಿ ನೌಕರರ ಸಂಘದಿAದ ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹುನ್ನಾಬಾದ್ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠರವರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಯನ್ನು ಮಾಡಿದ್ದು,ಈ ಘಟನೆಯನ್ನು ತಾಲೂಕಾ ಸರಕಾರಿ ನೌಕರರ ಸಂಘವು ಖಂಡಿಸುತ್ತದೆ ಮತ್ತು ಸರಕಾರವು ಹಲ್ಲೆಕೋರರನ್ನು ತಕ್ಷಣ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇತ್ತೀಚಿಗೆ ಸರಕಾರಿ ನೌಕರರ ಮೇಲೆ ಮೇಲಿಂದ ಮೇಲೆ ಇಂತಹ ಅಹಿತಕರ ಘಟನೆ ನಡಯದಂತೆ ತಡೆಯಲು ಸೂಕ್ತ ಭದ್ರತೆಯನ್ನು ಒದಗಿಸುವುದು ಹಾಗೂ ಕಠಿಣ ಕಾನೂನು ಕ್ರಮ ಜಾರಿಗೆ ತಂದು ನೌಕರರು ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈಸಂದರ್ಭದಲ್ಲಿ ಗ್ರೇಡ ೨ ತಹಶೀಲ್ದಾರ ಸಿ.ಜಿ ನಾಯ್ಕ, ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ , ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಶಿಕ್ಷಕರಾದ ನಾಗರತ್ನ ನಾಯ್ಕ ,ನಾರಾಯಣ ನಾಯ್ಕ ,ಆರೋಗ್ಯ ಇಲಾಖೆಯ ಡಿ.ಎಮ ಭಟ್ಟ,ಸಮಾಜಕಲ್ಯಾಣ ಇಲಾಖೆ ಸಿಬ್ಬಂದಿ ಮುಂತಾದವರು ಇದ್ದರು
Leave a Comment