ಕಾರವಾರ : ಡೆತ್ ನೀಟ್ ಬರೆದಿಟ್ಟು ಸರ್ಕಾರಿ ಉದ್ಯೋಗಿಯೋರ್ವರು ನಗರದ ಖಾಸಗಿ ಹೋಟೆಲಿನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಲ್ಲಿನ ಉಪವಿಭಾಧಿಕಾರಿ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಈಶ್ವರ ಭಟ್ (38) ನೇಣಿಗೆ ಶರಣಾದ ದುರ್ದೈವಿ. ಹೊನ್ನಾವರ ಮೂಲದವರಾಗಿ ಈಶ್ವರ ಭಟ್, ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ರೂಮು ಪಡೆದು ತಂಗಿದ್ದರು. ಗುರುವಾರ ಬೆಳಗ್ಗೆ ಚೆಕ್ ಔಟ್ ಮಾಡಿದ್ದ ಇವರು, ಮತ್ತೆ ಮುನಃ ರೂಮಿಗೆ ತೆರಳಿದ್ದರು. ಚೆಕ್ ಔಟ್ ಮಾಡಿದ್ದರೂ ರೂಮು ಬೀಡದ ಕಾರಣ ಹೋಟೆಲ್ ಸಿಬ್ಬಂದಿ ರೂಮಿನ ಬಳಿ ತೆರಳಿ ಎಷ್ಟೇ ಬಾಗಿಲು ಒಡಿದರೂ ತೆದಿರಲಿಲ್ಲ. ಬಳಿಕ ಅನುಮಾನಗೊಂಡ ಪೊಲೀಸರೊಂದಿಗೆ ಬಾಗಿಲು ಒಡೆದಾಗ ಈಶ್ವರ್ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದಾಗಿ ಪತ್ನಿ ಮತ್ತು ಪೊಲೀಸರಿಗೆ ಪ್ರತ್ಯೇಕ ಡೆತ್ ನೋಟ್ ಬರೆದಿಟ್ಟಿರುವ ಈಶ್ವರ್, ನಾನು ನಿಮಗಾಗಿ ಆಸ್ತಿ ಮಾಡಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ನಿಗೆ ಪತ್ರದಲ್ಲಿ ಕ್ಷಮೆಯಾಚನೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
Leave a Comment