ಭಟ್ಕಳ : ಅರಣ್ಯ ಭೂಮಿ ಹೋರಾಟದ 30 ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆ, ಫೆ, 17, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಭಟ್ಕಳ ತಾಲೂಕ ಅರಣ್ಯ ಅತೀಕ್ರಮಣದಾರರ ಸಭೆಯನ್ನು, ಫೆ. 13 ರಂದು ಮಧ್ಯಾಹ್ನ 3 ಘಂಟೆಗೆ, ಪ್ರವಾಸ ಮಂದಿರ (ಐಬಿ) ಭಟ್ಕಳದಲ್ಲಿ ಸಂಘಟಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತೆಯೇ ಹೊನ್ನಾವರ ತಾಲೂಕು ಅರಣ್ಯ ಅತಿಕ್ರಮಣದಾರರ ಸಭೆಯನ್ನು, ಫೆ. 13 ರಂದು ಮುಂಜಾನೆ 10 ಘಂಟೆಗೆ, ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಸಂಘಟಿಸಲಾಗಿದೆ.
Leave a Comment