ಜೈನ ಧರ್ಮದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಮೈಸೂರಿನ ಅಯೂಬ್ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಡಿ.ವೈ.ಎಸ್.ಪಿಯವರಿಗೆ ಮನವಿ ಸಲ್ಲಿಸಿದರು.
ಶ್ರೀ ಪದ್ಮಾವತಿ ಜ್ವಾಲಾಮಾಲಿನಿ ಮತ್ತು ಚಂದ್ರನಾಥ ಸ್ವಾಮಿ ಬಸ್ತಿ ಟ್ರಸ್ಟ್ ಹಾಡವಳ್ಳಿ ಇವರುಅಯೂಬ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದುಗ ಮನವಿ ನೀಡಿದ್ದಾರೆ.

ಮೈಸೂರಿನ ಅಯೂಬ್ ಖಾನ್ ಜೈನ ಧರ್ಮೀಯರ ಬಗ್ಗೆ ಟಿವಿ ಚಾನೆಲನಲ್ಲಿ ಹಿಜಾಬ್ ವಿಷಯವಾಗಿ ಚರ್ಚಿಸು ಸಂದರ್ಭದಲ್ಲಿ ಮೈಸೂರಿನ ಸಂಸದರಾಗಿರುವ ಪ್ರತಾಪ್ ಸಿಂಹ ಇವರನ್ನು ಟೀಕಿಸುವಾಗ ಜೈನ ಧರ್ಮಕ್ಕೆ ಸಂಬಂಧ ಪಟ್ಟಂತೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು “ಬೆಟ್ಟದ ಮೇಲೆ ಗೊಮ್ಮಟೇಶ್ವರನನ್ನು” ನಿಲ್ಲಿಸಿದ್ದೀರಿ ನೀವು ಮೊದಲು ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿ ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರುವ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿ ಎಂದು ಹಲವಾರು ಬಾರಿ ಚರ್ಚೆಯಲ್ಲಿ ಮಾತನಾಡಿದ್ದಾರೆ.
ಈ ರೀತಿ ಜೈನ ಧರ್ಮೀಯರಿಗೆ ಮತ್ತು ಅವರ ಆರಾಧಿಸುವ ಬಾಹುಬಲಿ ಸ್ವಾಮಿಗೆ ಈ ರೀತಿ ಅವಹೇಳನಕಾರಿಯಾಗಿ ನಿಂದಿಸಿ ಜೈನಧರ್ಮಕ್ಕೆ ನೋವುಂಟು ಮಾಡಿದ್ದಾರೆ ಇವರ ಅವಹೇಳನಕಾರಿ ಬಗ್ಗೆ ಜೈನ ಸಮಾಜವು ಕಠಿಣವಾಗಿ ಖಂಡಿಸುತದಾಗಿ ತಿಳಿಸಿದ್ದಾರೆ.
ಹಾಗೂ ಮೈಸೂರು ನಿವಾಸಿಯಾದ ಆಯೂಬ್ ಖಾನ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಲವಾರು ಬಾರಿ ಸಾಕಷ್ಟು ಜನ ಇದೇ ರೀತಿಯಲ್ಲಿ ಹೇಳಿಕೆಯನ್ನು ಹೇಳುತ್ತಾ ಜೈನ ಧರ್ಮೀಯರಿಗೆ ನೋವನ್ನುಂಟು ಮಾಡಿದ್ದಾರೆ ಇದನ್ನು ಜೈನ ಧರ್ಮಿಯರು ಸಹಿಸಿಕೊಳ್ಳುವುದು ಕಠಿಣದ ವಿಷಯ ಇನ್ನು ಮುಂದೆ ಯಾವುದೇ ವ್ಯಕ್ತಿ ಜೈನಧರ್ಮಕ್ಕೆ ಈ ರೀತಿಯ ಅವಹೇಳನಕಾರಿ ಅಸಭ್ಯ ಅನುಚಿತ ಹೇಳಿಕೆಗಳನ್ನು ನೀಡಿದರೆ ಅಂಥವರ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ, ಪಬ್ಲಿಕ ಟಿವಿಯ ಅರುಣ ಬಡಿಗೇರ್ ಇವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜೈನ ಧರ್ಮೀಯರ ಧಾರ್ಮಿಕ ನಂಬಿಕೆ ಹಾಗೂ ದೇವರುಗಳ ಮೇಲೆ ಅಶ್ಲೀಲವಾಗಿ ಮಾತನಾಡಿದ್ದು ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
Leave a Comment