
ಯಲ್ಲಾಪುರ:ದೈಹಿಕ ಶ್ರಮವಿಲ್ಲದೇ ನಾವು ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಕ್ರಿಯಾಶೀಲವಾಗಿ ಬದುಕಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿದೆ. ಎಂದು ವಜ್ರಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರ ಅಭಿಪ್ರಾಯಪಟ್ಟರು.
ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಕಾರವಾರದ ನೆಹರು ಯುವ ಕೇಂದ್ರ ಮತ್ತು ತೇಲಂಗಾರದ ಮೈತ್ರಿ ಯುವ ಬಳಗ ಸಂಯುಕ್ತವಾಗಿ ಸಂಘಟಿಸಿದ್ದ ಯುವ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನದ ಪರಿಪೂರ್ಣತೆ ಯೆಡೆಗೆ ಸಾಗಬೇಕು. ದುಡಿಮೆಯ ಬದುಕಿನಲ್ಲಿ ಚೈತನ್ಯವು ಅಡಗಿದೆ. ಯುವ ಸಮೂಹ ಜಡವಾಗದೇ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕಿದೆ. ಎಂದು ಹೇಳಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜಿ ಎನ್ ಕೋಮಾರ ಮಾತನಾಡಿ ಸಾಂಪ್ರದಯಿಕ ಕ್ರೀಡೆಗಳನ್ನು ನಾವು ಮರೆಯುತ್ತಿದದ್ದೇವೆ.ಗ್ರಾಮೀಣ ಜೀವನದ ಭೌಗೋಳಿಕ ಲಕ್ಷ್ಮಣಗಳೇ ಉತ್ತಮ ಕ್ರೀಡಾಪಟುಗಳನ್ನು ದೈಹಿಕವಾಗಿ ಸದೃಢ ರನ್ನಾಗಿ ರೂಪಿಸುವುದು. ಕ್ರೀಡೆಯ ಸಾಧನೆ ಯುವಸಮೂಹದ ಆದ್ಯತೆ ಆಗಬೇಕು ಎಂದರು.
ಸಭೆಯ ಅಧ್ಯಕ್ಷೆತೆಯನ್ನು ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ, ವಹಿಸಿದ್ದರು.ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಎನ್ ಎಸ್ ಭಟ್ಟ ಮತ್ತು ದಾಮೋದರ ಗೌಡ ಉಪಸ್ಥಿತರಿದ್ದರು. ಮೈತ್ರಿ ಬಳಗದ ಅಧ್ಯಕ್ಷ ಗಣಪತಿ ಕಂಚೀಪಾಲ ಸ್ವಾಗತಿಸಿದರು. ಶಿಕ್ಷಕ ಎಸ್ ಟಿ ಬೇವಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸರೋಜಾ ಭಟ್ಟ ವಂದಿಸಿದರು. ನಂತರ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ವಜ್ರಳ್ಳಿಯ ವಲಯ ಮಟ್ಟದ ಸ್ಪರ್ಧಾಳುಗಳು ಭಾಗವಹಿಸಿ ಟ್ರೋಫಿ ಗೆದ್ದರು.
Leave a Comment