ಸಿದ್ಧಾಪುರ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ 9 ರಿಂದ 12ನೇತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಲ್ಲಾಪುರದ ಹೋಲಿ ರೋಜರಿ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ 2021- 22 ನೇ ಸಾಲಿನ ಯುವ ವಿಜ್ಞಾನ ಸ್ಫರ್ಧೆಯಲ್ಲಿ ತಾಲೂಕಿನ ಬೇಡ್ಕಣಿಯ ಜನತಾವಿದ್ಯಾಲಯ ಫ್ರೌಢಶಾಲೆ ವಿದ್ಯಾರ್ಥಿ ಶರಧಿ ಹೆಗಡೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.

ಈತನಿಗೆ 3000 ರೂ. ನಗದು ಬಹುಮಾನ ನೀಡಲಾಗಿದ್ದು, ದ್ವೀತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇವನ ಸಾಧನೆಗೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರಾದ ಪ್ರತಿಮಾ ಪಾಲೇಕರ್ ಈತನಿಗೆ ಮಾರ್ಗದರ್ಶನ ನೀಡಿದ್ದರು.
Leave a Comment