
ಯಲ್ಲಾಪುರ: ತಾಲೂಕಿನ ಎನ್ ಆಯ್ ಆರ್ ಟೀಮಗೆ ಹೊಸದಾಗಿ ಮೂವರು ಪಿಟಿಸಿಗಳು ಬಂದಿದ್ದಾರೆ, .ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮಾಡುವವವರಿಗೆ ಬ್ಯಾಂಕನ ಸಾಲಸೌಲಭ್ಯ ಕೊಡಿಸಲು , ಕಿರು ಅರಣ್ಯೋತ್ಪನ್ನಗಳ ಮೌಲ್ಯವರ್ಧಿತ ಹಾಗೂ ಗುಣಮಟ್ಟ ಆಧಾರಿತ ವಸ್ತುಗಳ ಪ್ಯಾಕಿಂಗ ,ಮಾರಾಟ ವ್ಯವಸ್ಥೆ ತಾಪಂ ಎನ್ ಆಯ್ ಆರ್ ಟೀಮ ನಿಂದ ಮಾಡ್ತಾ ಇದ್ದೇವೆ. ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.

ಅವರು ತಾಲೂಕಿನ ಇಡಗುಂದಿಯ ಸೀತಾರಾಮಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ವನಚೇತನ ಸಹ್ಯಾದ್ರಿ ಸಂಚಯ ಮಂಗಳೂರು ಇವರು ಇಸಿಜಿ ಯಂತ್ರ ನೀಡಿದ್ದು ಅದನ್ನು ಮಹಿಳಾ ಒಕ್ಕೂಟದಿಂದ ಪ್ರಾಥಮಿಕ ಆರೋಗ್ಯ ಘಟಕಕ್ಕೆ ಇಸಿಜಿ ಮಶಿನ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಅಣಬೆ ಶೆಡ್ ಗಳನ್ನು ಮಾಡಲಾಗುತ್ತಿದೆ ಇದನ್ನು ಇಡಗುಂದಿ ಯಶಸ್ವಿ ಟೀಮ ಕೊಡ್ತಾ ಇದ್ದೇವೆ. ಸಂಘಗಳಿAದ ಆರೋಗ್ಯ ಸೇವೆನೀಡುವ ಸಾಮುದಾಯಿಕ ಕೆಲಸ ಕಾರ್ಯಗಳನ್ನು ಮಾಡಲಿಕ್ಕೆ ಕಟಿಬಧ್ದರಾಗಿರುವದು ಶ್ಲಾಘನೀಯ .ಅಂತೆಯೇ ತಾಪಂನಿAದ ೫೩ ಸಂಘಗಳ ಒಕ್ಕೂಟಗಳ ಮುಖಾಂತರ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಎಂದರು. À್ತ

ತಾಪಂ ಆಡಳಿತಾಧಿಕಾರಿ ನಟರಾಜ್ ಎಚ್ ಮಾತನಾಡಿ ರೈತರ ,ಮಹಿಳೆಯರ ಸಂಘಟನೆ ಬಲಪಡಿಸಲು ಸರಕಾರ ಸಂಘಗಳಿಗೆ .ಹತ್ತು ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಅವಕಾಶ ಕಲ್ಪಿಸಿದೆ .ಸದಸ್ಯರೆಲ್ಲರೂ ಸಂಘಗಳ ಬೆಳವಣಿಗೆಗೆ ಪೂರಕವಾದ ಸ್ಥಳಿಯ ಸಂಪನ್ಮೂಲಗಳಿಗೆ ಒತ್ತು ಕೊಡುವ ಉದ್ಯಮಕ್ಕೆ ಯೋಜನೆ ರೂಪಿಸಿ ಸ್ಥಳಿಯ ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.ಎಂದರು.ಸAಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಜೆಶ್ವರಿ ಸಿದ್ದಿ ಮಾತನಾಡಿ ಗೃಹದ್ಯೋಮಕ್ಕೆ ಉತ್ತೇಜನ ನೀಡುವ ಮೂಲಕ ಮಹಿಳೆಯರಿಂದಲೇ ಮಹಿಳೆಯರಿಗೆ ಬಲ ತುಂಬುವ ಕಾರ್ಯ ನಮ್ಮ ಸಂಘಟನೆಯಿAದ ಮಾಡಲಾಗುತ್ತಿದೆ.ಇದರಿಂದ ಆರ್ಥಿಕÀವಾಗಿಹೆಚ್ಚು ಸಧೃಡವಾಗಿದ್ದರೂ ಕೂಡಾ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡದೆ ನಿರ್ಲಕ್ಷಿಸುವದು ಕಂಡು ಬರುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನÀ ಚಿಕಿತ್ಸೆ ಯೂ ಲಭ್ಯವಿರುವದಿಲ್ಲ. ಬುಡಕಟ್ಟು, ಸಿದ್ದಿ ಸಮುದಾಯದವರಿಗೆ ಸದಾ ನೆರವಿನ ಹಸ್ತ ನೀಡುತ್ತಿರುವ ಮಂಗಳೂರಿನ ವನಚೇತನ ಸಹ್ಯಾದ್ರಿ ಸಂಚಯ ತಂಡದವರು ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಲು ಮುಂದಾÀದಾಗ ನಾನು ನಮ್ಮ ಸಮುದಾಯದವರೊಂದಿಗೆ ಇತರರಿಗೂ ಆರೋಗ್ಯ ರಕ್ಷಣೆಯಾಗಲಿ ಎಂಬ ಸದುದ್ದೇಶದಿಂದ ನಮ್ಮ ಒಕ್ಕೂಟದಿಂದ ಇಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದ್ದೇವೆ.ಗ್ರಾಪಂ ಸದಸ್ಯ ವಿ.ಎನ್ಭಟ್ಟ ಹಾಗೂ ಇತರರು ಈಸಿಜಿ ಗೆ ಬೇಕಾಗುವ ಬೆಡ್ ನ್ನು ನೀಡಿದ್ದಾರೆ ಅವರಿಗೂ ಸಹ್ಯಾದ್ರಿ ಸಂಚಯ ತಂಡದವರಿಗೆ ನಮ್ಮ ಒಕ್ಕೂಟದವರು ಸದಾ ಋಣಿಯಾಗಿದ್ದೇವೆ ಎಂದರು.ಸಹ್ಯಾದ್ರಿ ಸಂಚಯದ ದಿನೇಶ ಹೊಳ್ಳ, ಯಾವದೇ ಸೌಲಭ್ಯಗಳಿಲ್ಲದ ಬುಡಕಟ್ಟು ವಿದ್ಯಾರ್ಥಿ,ಜನರಿಗೆ ಸೌಲಭ್ಯ , ಕಲಿಕೆಪರಿಕರ ಒದಗಿಸುವ ,ಸಹಾಯಹಸ್ತನೀಡುವ ಕಾÀರ್ಯದಲ್ಲಿ ತಮ್ಮ ತಂಡ ಸಕ್ರೀಯವಾಗಿದೆ ಎಂದರು. ತಂಡದ ರಾಕೇಶ ಬುಳ್ಳಾರ ಮಾತನಾಡಿ ಈಸಿಜಿ ಯಂತ್ರ ಕಾರ್ಯ ನಿರ್ವಹಿಸುವ ಕುರಿತು ತಿಳಿಸಿದರು.ಆರೋಗ್ಯ ಕೇಂದ್ರದ ಡಾ ಶಂಕರ ಜತ್ತಿ ಮಾತನಾಡಿ ಈ ಯಂತ್ರ ಸ್ಥಳಿಯವಾಗಿ ಲಭ್ಯವಿರುವದರಿಂದ ರೋಗಿಗೆ ಹೃದಯಾಘಾತವಾದರೂ ಪ್ರಾಣಾಪಾಯ ತಪ್ಪಿಸುವಲ್ಲಿ ಸಹಕಾರಿಯಾಗುತ್ತz.ಹೆದರದೇೆ ಇದರ ಸದುಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು ಗ್ರಾಪಂ ಸದಸ್ಯ ವಿ.ಎನ್ ಭಟ್ಟ, ಎಸ್ಆರ್ಡಿ ಸಂಪನ್ಮೂಲ ವ್ಯಕ್ತಿ ಕೆ.ಎಸ್ ಭಟ್ , ಒಕ್ಕೂಟದ ಮೇಲ್ವಿಚಾರಕರಾದÀ ಮಂಜಣ್ಣ ಬಿ, ರಾಜಾರಾಮ ವೈದ್ಯ, ಪ್ರಮುಖರಾದ,ಅನಂತ ಸಿದ್ದಿ ,ಉಪಸ್ಥಿತರಿದ್ದರು. ರಾಜೇಶ್ವರಿ ಸಿದ್ದಿ ಪ್ರಾರ್ಥಿಸಿದರು. ವೀಣಾ ದೇವಳಿ ನಿರ್ವಹಿಸಿದರು. ಗ್ರಾಂ ಪಂ ಕಾರ್ಯದರ್ಶಿ ರಾಘವೇಂದ್ರ ಭಾಗ್ವತ ವಂದಿಸಿದರು .
Leave a Comment