ಸಿದ್ದಾಪುರ : ಪಟ್ಟಣದ ಹೊಸೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏ.3ರಂದು ಸ್ಥಳೀಯ ಶ್ರೀಬಂಕೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯವರು ಆಹ್ವಾನಿತ ಜಂಗೀ ನಿಕಾಲೆ ಕುಸ್ತಿ ಆಯೋಜಿಸಿದ್ದಾರೆ.
ಸಭಾಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಕುಸ್ತಿ ಅಂಕಣವನ್ನು ಉದ್ಯಮಿ ರೂಡಾಲ್ಸ್ ಫರ್ನಾಡಿಸ್ ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ ಅಧ್ಯಕ್ಷತೆವಹಿಸಲಿದ್ದಾರೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಸೊರಬ ಉದ್ಯಮಿ ರಾಜು ಎಂ ತಲ್ಲೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀಮಣ್ಣ ನಾಯ್ಕ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಸ್ಥಳೀಯ ಬಂಕೇಶ್ವರ ದೇವಾಲಯದ ಅಧ್ಯಕ್ಷೆ ಆರ್. ಆಯ್.ನಾಯ್ಕ, ಬೊಮ್ಮೇಶ್ವರ ದೇವಾಲಯದ ಅಧ್ಯಕ್ಷ ಸುರೇಶ ನಾಯ್ಕ, ಪ.ಪಂ ಸದಸ್ಯ ಮಾರುತಿ ನಾಯ್ಕ, ಮಂಜುಳಾ ನಾಯ್ಕ, ಯಶೋಧಾ ಮಡಿವಾಳ, ವಿಜೆಂದ್ರ ಗೌಡರ್, ಕೆ.ಜಿ. ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಪಿ.ಬಿ. ಹೊಸೂರು, ಸುರೇಂದ್ರ ದಪೇದಾರ್ ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment