ಅಂಕೋಲಾ : ಶ್ರೀ ನಾರಾಯಣ ಗುರು ವೇದಿಕೆ ವತಿಯಿಂದ ತಾಲೂಕು ಮಟ್ಟದ ನಾಮಧಾರಿ ಸಮಾಜದ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಳೆದ ಶೈಕ್ಷಣಿಕ ವರ್ಷ 2020 – 21 ರಲ್ಲಿ ನಡೆದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿವಿಧ ತರಗತಿಯ ಅರ್ಹ ಅಭ್ಯರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಎಸ್ ಎಸ್. ಎಲ್. ಸಿ ಪಿಯುಸಿ, ಪದವಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜೊತೆಗೆ ಭಾವಚಿತ್ರವನ್ನು ಕಳುಹಿಸಬೇಕು.
ಎಸ್.ಎಸ್.ಎಲ್.ಸಿ ಯಲ್ಲಿ ಶೇ. 80 ಅಂಕಕ್ಕಿAತ ಮೇಲ್ಪಟ್ಟಿರಬೇಕು. ಪಿಯುಸಿಯಲ್ಲಿ ಶೇ. 70 ಕ್ಕಿಂತ ಮೇಲ್ಪಟ್ಟು, ಪದವಿಯಲ್ಲಿ ಶೇ. 70 ಕ್ಕಿಂತ ಮೇಲ್ಪಟ್ಟಿರಬೇಕು. ಹಾಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಮೇ. 10 ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಭಾವಚಿತ್ರವನ್ನು ಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜುಗುಣಿ, ಮೊ ನಂ : 9844384013 ಹಾಗೂ ಕಾರ್ಯದರ್ಶಿ ಮಂಜುನಾಥ ಕೃಷ್ಣ ನಾಯ್ಕ, ಮೊ.ನಂ : 9901285838 ಸಮಪರ್ಕಿಸಲು ಕೋರಲಾಗಿದೆ. ಅಂಚೆ ಮೂಲಕ ಕಳುಸುವವರು ನಾಗರಾಜ ಮಂಜಗುಣಿ, ಅಂಚೆ : ಮಂಜುಗುಣಿ ತಾ: ಅಂಕೋಲಾಗೆ ಕಳುಹಿಸಲು ಕೋರಲಾಗಿದೆ.
Leave a Comment