ಹಳಿಯಾಳ (ಜಿ: ಉತ್ತರ ಕನ್ನಡ) : ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಶಿಶುವನ್ನು ರಕ್ಷಿಸಿದ್ದಾರೆ. ಈ ಶಿಶು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿದೆ.
ಶಿಶುವು ತಾಲೂಕಿನ ತಟ್ಟಿಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡ ಗ್ರಾಮದ ಸಾವಿತ್ರಿ ದೊಂಡು ಡೊಯಿಪಡೆ (26) ದಂಪತಿ ಕುಡಿಯೆನ್ನಲಾಗಿದೆ. ಆರು ದಿನಗಳ ಹಿಂದೆಯಚ್ಟೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೆಣ್ಣು ಶಿಶುವಿನ ಜನ್ಮವಾಗಿತ್ತು. ತಾಯಿ ಸಾವಿತ್ರಿ ಡೊಯಿಪಡೆ ಸ್ವತಃ ಈ ಮಾರಾಟದ ಕೃತ್ಯದಲ್ಲಿ ಭಾಗಿಯಾಗಿದ್ದು, ಅವಳ ಜೊತೆ ಸಹೋದರ ಬಯ್ಯಾ ಪಟಕಾರೆ, ಆಶಾ ಕಾರ್ಯಕರ್ತೆ ರೋಜಿ ದಬಾಲಿ ಹಾಗೂ ಅಗಸಲಕಟ್ಟಾದ ಮಮ್ತಾಜ್ ಹಳಬ ಶಾಮೀಲಾಗಿದ್ದರು ಎನ್ನಲಾಗಿದೆ.
ಇವರು ಯಲ್ಲಾಪುರ ತಾಲೂಕಿನ ಕಿರವತ್ತಿಯ ರಾಹತ್ ಅಬ್ದುಲ್ ರಹೆಮಾನ್ ಪಟೇಲ್ ದಂಪತಿಗೆ 25 ಸಾವಿರ ರೂ. ಗಳಿಗೆ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ತಾಲೀಕಿನಾದ್ಯಂತ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿಯುತ್ತಿದ್ದರೂ ಸಿಡಿಪಿಒ ಡಾ.ಲಕ್ಷಿö್ಮÃದೇವಿ ಮುಂದಾಳತ್ವದಲ್ಲಿ ಪಿಎಸ್ಐ ಶಿವಾನಂದ ನಾವದಗಿ, ಪಿಡಿಒ ಮಹಾಂತೇಶ ಹುರಕಡ್ಲಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಮಹಿಳಾ ಪೇದೆ ರಮ್ಯಾ ತಂಡವು ಅರಣ್ಯ ದಂಚಿನಲ್ಲಿರುವ ಗೌಳಿವಾಡ ಗ್ರಾಮಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತು.
ಮಂಗಳವಾರ ಕಾರವಾರದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಯಲ್ಲಾಪುರದ ಕಿರವತ್ತಿಗೆ ತೆರಳಿ ಶಿಶುವನ್ನು ರಕ್ಷಿಸಿದ್ದು, ಸದ್ಯ ಶಿಶುವನ್ನು ಶಿರಸಿಯ ಸಹಾಯ ಟ್ರಸ್ಟಿಗೆ ಹಸ್ತಾಂತರಿಸಲಾಗಿದೆ. ಪಾಲಕರು ತಮಗೆ ಶಿಶು ಹಾಗೂ ಮಕ್ಕಳು ಬೇಡವಾದಲ್ಲಿ ದಯವಿಟ್ಟು ಮಾರಾಟ ಮಾಡಬೇಡಿ, ಇಲಾಖೆಯ ವತಿಯಿಂದ ಮಮತೆಯ ತೊಟ್ಟಿಲು ಎಂಬ ಯೋಜನೆಯಡಿಯಲ್ಲಿ ಶಿಶುವನ್ನು ಕಾನೂನಾತ್ಮಕವಾಗಿ ದತ್ತು ಪಡೆದು ಪಾಲನೆ ಘೋಷಣೆ ಮಾಡಲಾಗುತ್ತದೆ ಸಿಡಿಪಿಒ ಡಾ. ಲಕ್ಷಿö್ಮÃದೇವಿ ಎಸ್. ಅವರು ಮನವಿ ಮಾಡಿದ್ದಾರೆ.
Leave a Comment